HomeGadag Newsಎಲ್ಐಸಿಯೊಂದಿಗೆ ಜೀವನವನ್ನು ಭದ್ರಪಡಿಸಿಕೊಳ್ಳಲು ಜನರಿಗೆ ಸಲಹೆ

ಎಲ್ಐಸಿಯೊಂದಿಗೆ ಜೀವನವನ್ನು ಭದ್ರಪಡಿಸಿಕೊಳ್ಳಲು ಜನರಿಗೆ ಸಲಹೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜೀವ ವಿಮಾ ನಿಗಮ ಧಾರವಾಡ ವಿಭಾಗ ಮಟ್ಟದ ಪ್ರತಿನಿಧಿಗಳಿಗೆ ಸ್ಪರ್ಧೆ, ನಮ್ಮ ನಡೆ ಪ್ರತಿನಿಧಿಗಳ ಮನೆಯ ಕಡೆ ಭೇಟಿ ಕಾರ್ಯಕ್ರಮದ ಅಂಗವಾಗಿ ಗದಗ ೧ನೇ ಶಾಖೆಯಿಂದ ೧೩ ಪ್ರತಿನಿಧಿಗಳು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರವರ ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ ತಿಮ್ಮಾಪೂರ ಗ್ರಾಮದ ವಿಮಾ ಪ್ರತಿನಿಧಿಯಾದ ಯಲ್ಲಪ್ಪ ಎಚ್.ಬಾಬರಿ ಅವರ ಮನೆಗೆ ಭೇಟಿ ನೀಡಿ ದಂಪತಿಗಳನ್ನು ಸನ್ಮಾನಿಸಿ ಧಾರವಾಡ ವಿಭಾಗದ ಎಸ್‌ಡಿಎಂ ಬಿ.ಎಸ್. ಚಕ್ರವರ್ತಿ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ದೇಶದಲ್ಲೇ ಅತಿ ದೊಡ್ಡ ವಿಮಾ ಸಂಸ್ಥೆಯಾಗಿದ್ದು, ಅದು ತನ್ನ ಗ್ರಾಹಕರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಇದೀಗ ತನ್ನ ಎಲ್ಲಾ ಪಾಲಿಸಿಗಳನ್ನು ಹೊಸದಾಗಿ ನವೀಕರಿಸಿದ್ದು, ಗ್ರಾಹಕರು ತಮ್ಮ ಮುಂದಿನ ಜೀವನವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಿ ಎಂದು ಹೇಳಿದರು.

ಎಂಎA ರತ್ನಪ್ರಭಾ ಮಾತನಾಡಿ, ಧಾರವಾಡ ವಿಭಾಗದಲ್ಲಿ ಗದಗ ೧ನೇ ಶಾಖೆಯ ವತಿಯಿಂದ ೧೩ ಪ್ರತಿನಿಧಿಗಳು ಆಯ್ಕೆಯಾಗಿದ್ದು ಸಂತಸದ ಸಂಗತಿ ಎಂದರು.

ಈ ಸಂದರ್ಭದಲ್ಲಿ ಎಂ.ಎಸ್. ಚಿದಾನಂದ, ಗದಗ ಶಾಖೆಯ ಮ್ಯಾನೇಜರ್ ಎಚ್.ಎಂ. ಭಜಂತ್ರಿ, ಉಪಶಾಖಾಧಿಕಾರಿ ಮಹಾಂತೇಶ ಪಾಲ್ಗೊಂಡಿದ್ದರು. ಪ್ರತಿನಿಧಿಗಳಾದ ಮಲ್ಲೇಶ ಬಸರಿಮರದ, ಉಮೇಶ್ ನವಲಗುಂದ, ವೀರೇಶ್ ಗುಗ್ರಿ, ಶಿವಾನಂದ ಮರಿಗೌಡ್ರು, ರಮೇಶ್ ಹಾದಿಮನಿ, ಫಕ್ರುದ್ದೀನ್ ಬಾಬು ಖಾನ್, ಆರ್.ಎಫ್. ಗಾಣಿಗೇರ, ಬಿ.ಆರ್. ಕುಲಕರ್ಣಿ, ಜ್ಯೋತಿ ಹಿರೇಮಠ, ರಾಜೇಶ್ವರಿ ಕುಲಾಲ್, ರಾಘವೇಂದ್ರ ಹೊಸಮನಿ, ಹನುಮಪ್ಪ ವಾಲ್ಮೀಕಿ ಇವರನ್ನು ಸನ್ಮಾನಿಸಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!