HomeBengaluru Newsಬೆಂಗಳೂರಿಗರಿಗೆ ಗುಡ್ ನ್ಯೂಸ್..! ಮನೆ ಬಾಗಿಲಿಗೆ ಇ-ಖಾತಾ ಸೇವೆ

ಬೆಂಗಳೂರಿಗರಿಗೆ ಗುಡ್ ನ್ಯೂಸ್..! ಮನೆ ಬಾಗಿಲಿಗೆ ಇ-ಖಾತಾ ಸೇವೆ

For Dai;y Updates Join Our whatsapp Group

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಗುಡ್ ನ್ಯೂಸ್ ನೀಡಿದೆ.

ಇ-ಖಾತಾ ಪಡೆಯಲು ಕಷ್ಟಪಡುತ್ತಿರುವ ಸಾರ್ವಜನಿಕರಿಗಾಗಿ ವಿಶೇಷ ಇ-ಖಾತಾ ಮೇಳ ಆಯೋಜಿಸಲು BBMP ಮುಂದಾಗಿದೆ.

ಮೇ 16ರಿಂದ ನಗರದ ವಿವಿಧ ಭಾಗಗಳಲ್ಲಿ ಇ-ಖಾತಾ ಮೇಳ ಆರಂಭವಾಗಲಿದ್ದು, BBMP ವ್ಯಾಪ್ತಿಯ ಐದು ನಗರ ಪಾಲಿಕೆಗಳ 50 ಸ್ಥಳಗಳಲ್ಲಿ ಈ ಮೇಳ ನಡೆಯಲಿದೆ. ಈಗಾಗಲೇ ಸುಮಾರು 10 ಲಕ್ಷ ಇ-ಖಾತಾಗಳನ್ನು ವಿತರಣೆ ಮಾಡಲಾಗಿದ್ದು, ಇನ್ನೂ 25 ಲಕ್ಷ ಆಸ್ತಿಗಳನ್ನು ಇ-ಖಾತಾ ವ್ಯಾಪ್ತಿಗೆ ತರಲು BBMP ಯೋಜನೆ ರೂಪಿಸಿದೆ.

ಮೇ 16ರ ಬಳಿಕ ಪ್ರತಿ ಶನಿವಾರವೂ ಇ-ಖಾತಾ ಮೇಳ ನಡೆಯಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ನೇರವಾಗಿ ಇ-ಖಾತಾಗೆ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದಾಗಿದೆ.

ಇ-ಖಾತಾ ಮೇಳದಲ್ಲಿ ಯಾವುದೇ ಮಧ್ಯವರ್ತಿಗಳ ಕಾಟ ಅಥವಾ ಲಂಚದ ಬೇಡಿಕೆ ಇರುವುದಿಲ್ಲ ಎಂದು BBMP ತಿಳಿಸಿದೆ. ಸಾರ್ವಜನಿಕರು ನೇರವಾಗಿ ಅಧಿಕಾರಿಗಳ ಮೂಲಕ ಸೇವೆ ಪಡೆಯಬಹುದಾಗಿದೆ.

ಇ-ಖಾತಾಗೆ ಅಗತ್ಯವಿರುವ ದಾಖಲೆಗಳು ಹೀಗಿವೆ:

  • ಸೇಲ್ ಡೀಡ್ / ಟೈಟಲ್ ಡೀಡ್
  • ಪ್ರಾಪರ್ಟಿ ಟ್ಯಾಕ್ಸ್ ರಸೀದಿ
  • ಎಸ್‌ಎಎಸ್ ಪ್ರಾಪರ್ಟಿ ಟ್ಯಾಕ್ಸ್ ಐಡಿ
  • ಆಧಾರ್ ಕಾರ್ಡ್ ಹಾಗೂ ಇ-ಕೆವೈಸಿ
  • ಇಸಿ (Encumbrance Certificate)
  • ಬೆಸ್ಕಾಂ ಬಿಲ್
  • ಆಸ್ತಿಯ ಜಿಪಿಎಸ್ ಲೊಕೇಶನ್

ಇ-ಖಾತಾ ಸೇವೆಯನ್ನು ಸರಳ ಹಾಗೂ ಪಾರದರ್ಶಕಗೊಳಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು BBMP ಅಧಿಕಾರಿಗಳು ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img