HomeGadag Newsಪ್ರತಿ ಶವಯಾತ್ರೆಯಲ್ಲಿ ತಪ್ಪದೆ ಕಾಣಿಸುವ ಬಿಳಿ ನಾಯಿ: ಅಚ್ಚರಿಗೊಂಡ ಡಂಬಳ ಗ್ರಾಮಸ್ಥರು! ಏನಿದು ವಿಸ್ಮಯ?

ಪ್ರತಿ ಶವಯಾತ್ರೆಯಲ್ಲಿ ತಪ್ಪದೆ ಕಾಣಿಸುವ ಬಿಳಿ ನಾಯಿ: ಅಚ್ಚರಿಗೊಂಡ ಡಂಬಳ ಗ್ರಾಮಸ್ಥರು! ಏನಿದು ವಿಸ್ಮಯ?

For Dai;y Updates Join Our whatsapp Group

Spread the love

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಅಪರೂಪದ ಹಾಗೂ ವಿಸ್ಮಯಕಾರಿ ಘಟನೆಯೊಂದು ಗ್ರಾಮಸ್ಥರ ಗಮನ ಸೆಳೆದಿದೆ.

ಗ್ರಾಮದಲ್ಲಿ ಯಾರೇ ನಿಧನ ಹೊಂದಿದರೂ, ಬಿಳಿ ಬಣ್ಣದ ಬೀದಿ ನಾಯಿಯೊಂದು ಅಂತ್ಯಯಾತ್ರೆಯಲ್ಲಿ ತಪ್ಪದೆ ಭಾಗವಹಿಸಿ ಸ್ಮಶಾನದವರೆಗೂ ತೆರಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗ್ರಾಮಸ್ಥರ ಪ್ರಕಾರ, ಕೆಲ ತಿಂಗಳ ಹಿಂದೆ ಪಾರಮ್ಮ ಎಂಬ ಮಹಿಳೆಯ ನಿಧನದ ಬಳಿಕ ಈ ವಿಚಿತ್ರ ನಡೆ ಆರಂಭವಾಗಿದೆ. ಆ ಬಳಿಕ ಗ್ರಾಮದಲ್ಲಿ ನಡೆಯುವ ಪ್ರತಿಯೊಂದು ಅಂತ್ಯಸಂಸ್ಕಾರದ ಮೆರವಣಿಗೆಯಲ್ಲೂ ಈ ನಾಯಿ ಕಾಣಿಸಿಕೊಳ್ಳುತ್ತಿದೆ.

ಮೃತರ ಮನೆ ಬಳಿಯಿಂದಲೇ ಮೆರವಣಿಗೆಯೊಂದಿಗೆ ಸಾಗುವ ಈ ನಾಯಿ, ಸ್ಮಶಾನಕ್ಕೆ ತಲುಪಿದ ಬಳಿಕವೂ ಅಂತ್ಯಸಂಸ್ಕಾರ ಪೂರ್ಣಗೊಳ್ಳುವವರೆಗೂ ಅಲ್ಲಿಯೇ ಉಳಿದುಕೊಂಡು ನಂತರ ತನ್ನ ದಾರಿಯನ್ನು ಹಿಡಿಯುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಘಟನೆ ಗ್ರಾಮದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಕೆಲವರು ಇದನ್ನು ಭಾವನಾತ್ಮಕ ಬಂಧನ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಇದು ಪ್ರಾಣಿಗಳ ವಿಶಿಷ್ಟ ಸಂವೇದನೆ ಎಂದು ಅಭಿಪ್ರಾಯಪಡುತ್ತಿದ್ದಾರೆ.

ಸ್ಥಳೀಯರಾದ ಈರಣ್ಣ ಸಲಗಾರ ಹಾಗೂ ಮಂಜುನಾಥ ಸಂಜಿವಣ್ಣವರ ಅವರು ಈ ಬಗ್ಗೆ ಮಾತನಾಡಿ, “ನಾವು ಹಲವು ವರ್ಷಗಳಿಂದ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ. ಆದರೆ ಪ್ರತಿಯೊಂದು ಅಂತ್ಯಸಂಸ್ಕಾರದಲ್ಲಿ ತಪ್ಪದೆ ಭಾಗವಹಿಸುವ ನಾಯಿಯನ್ನು ಎಂದಿಗೂ ನೋಡಿಲ್ಲ. ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ,” ಎಂದು ತಿಳಿಸಿದ್ದಾರೆ.

ಒಟ್ಟಾರೆ, ನಾಯಿಗಳು ಮಾನವ ಭಾವನೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿರುವುದರಿಂದ ಇಂತಹ ವರ್ತನೆ ಕಾಣಿಸಬಹುದು ಎಂದು ಹೇಳಬಹುದಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!