ರಾಯಚೂರು;- ಜಿಲ್ಲೆಯಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಜಿಲ್ಲೆಯ ಮಾನ್ವಿ ತಾಲೂಕಿನ ಯರಮಲದೊಡ್ಡಿ ಗ್ರಾಮದ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಜೀವ ಭಯದಲ್ಲಿದ್ದಾರೆ.
ಯರಮಲದೊಡ್ಡಿ ಗ್ರಾಮದ ಜಮೀನಿನಲ್ಲಿ ಮೇಕೆಯನ್ನು ಬೇಟೆಯಾಡಿ ಚಿರತೆ ತಿಂದು ಹಾಕಿದೆ. ಇದು ತೋಳದ ಹೆಜ್ಜೆಯ ಗುರುತು ಎಂದು ಹೇಳಿ ಜಾರಿಕೊಳ್ಳಲು ಅರಣ್ಯಾಧಿಕಾರಿ ಯತ್ನಿಸಿದ್ದಾರೆ. ಮರುದಿನ ಭಾರಿ ಗಾತ್ರದ ಜಿಂಕೆಯನ್ನು ಬೇಟೆ ಆಡಿ ಚಿರತೆ ಕೊಂದು ಹಾಕಿದೆ. ಬಾರಿ ಗಾತ್ರದ ಜಿಂಕೆಯನ್ನು ನೋಡಿ ಇದು ಚಿರತೆಯ ಕೆಲಸ ಎಂದು ಅರಣ್ಯ ಅಧಿಕಾರಿ ಯೂ ಟರ್ನ್ ಹೊಡೆದಿದ್ದಾರೆ.
ಜಮೀನಿಗೆ ಹೋಗಲು ಯರಮಲ ಗ್ರಾಮದ ಜನ ಭಯಭೀತರಾಗಿದ್ದಾರೆ. ಸತತ ಎರಡು ದಿನ ಬೇಟೆಯಾಡಿ ಎರಡು ಪ್ರಾಣಿಗಳನ್ನು ಚಿರತೆ ಕೊಂದು ಹಾಕಿದೆ. ಜನರ ಜೀವ ಹೋಗುವ ಮೊದಲು ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಗರಮ್ ಆಗಿದ್ದಾರೆ.



