HomeGadag Newsಜಾತ್ರಾ ಮಹೋತ್ಸವದ ಪೂರ್ವಬಾವಿ ಸಭೆ

ಜಾತ್ರಾ ಮಹೋತ್ಸವದ ಪೂರ್ವಬಾವಿ ಸಭೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಘನಮೌನಿ, ತ್ರಿಕಾಲ ಜ್ಞಾನಿ, ಮೌನ ತಪಸ್ವಿ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ೩೦ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಪೂರ್ವಬಾವಿ ಸಭೆ ಇತ್ತೀಚೆಗೆ ಜರುಗಿತು.

ಸಭೆಯಲ್ಲಿ ಸುಕ್ಷೇತ್ರ ಬಳಗಾನೂರ ಶ್ರೀಮಠದ ಪರಮಪೂಜ್ಯ ಶ್ರೀ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸಿದ್ದರು. ಸಭೆಯಲ್ಲಿ ಶ್ರೀಮಠದ ಭಕ್ತರು, ಶರಣರ ಬಳಗದ ಹಿರಿಯರು ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

2024ರ ಫೆ. 4ರಂದು ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಸಾಮೂಹಿಕ ವಿವಾಹದಲ್ಲಿ  ಅಸಕ್ತ ವಧು-ವರರ ಹೆಸರುಗಳನ್ನು ಜನವರಿ 28, 2024ರ ಒಳಗಾಗಿ ನೋಂದಾಯಿಸಲು ಮೊ.ಸಂ.- 8880808822, 9483661263  ಸಂಪರ್ಕಿಸಬಹುದು. ವಿವಾಹಗಳ ದಾಖಲಾತಿಗಾಗಿ ಶ್ರೀಮಠದಲ್ಲಿ ಮಾತ್ರ ವಿವರವಾದ ಮಾಹಿತಿ ಪಡೆಯಬೇಕು ಎಂದು ಸುಕ್ಷೇತ್ರ ಬಳಗಾನೂರ ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!