HomeLife Styleದಾಳಿಂಬೆ ಗಿಡದ ಎಲೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ದಾಳಿಂಬೆ ಗಿಡದ ಎಲೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

For Dai;y Updates Join Our whatsapp Group

Spread the love

ಕೆಂಪನೆಯ ಈ ದಾಳಿಂಬೆ ಹಣ್ಣು ರುಚಿಯಲ್ಲಿ ಬೆಸ್ಟ್‌ ಅಂತಾ ಅನಿಸಿಕೊಳ್ಳುವುದರ ಜೊತೆಗೆ ಆರೋಗ್ಯ ಪ್ರಯೋಜನಗಳಿಗೂ ಹೆಸರುವಾಸಿಯಾಗಿದೆ. ದಾಳಿಂಬೆ ಬಿಡಿಸಿ ಅದರ ಕಾಳುಗಳನ್ನು ತಿನ್ನುವುದು ಎಷ್ಟು ರುಚಿ ನೀಡುತ್ತದೆಯೋ, ಅದರ ಎಲೆ ಎಲೆಗಳು ಸಹ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ.

ಆಯುರ್ವೇದದಲ್ಲಿಯೂ ಈ ದಾಳಿಂಬೆ ಎಲೆಗಳನ್ನು ಹಲವಾರು ರೀತಿಯ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಈ ಹಣ್ಣಿನ ಎಲೆಗಳ ಕಷಾಯವನ್ನು ತಯಾರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ, ಋತುಮಾನದಲ್ಲಿ ಪದೇ ಪದೇ ಬರುವ ಕೆಮ್ಮು ಶೀತದಿಂದ ಮುಕ್ತಿ ನೀಡುತ್ತದೆ. ಇದಲ್ಲದೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಇದರಲ್ಲಿ ಇದ್ದು ಮನೆಯಲ್ಲಿಯೇ ಬೆಳೆಸಿಕೊಂಡು ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

  • ಆಯುರ್ವೇದದಲ್ಲಿ ದಾಳಿಂಬೆ ಹಣ್ಣಿನ ಎಲೆಗಳನ್ನು ಕುಷ್ಠರೋಗ ಮತ್ತು ಚರ್ಮದ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ.
  • ನಿದ್ರಾಹೀನತೆ ಸಮಸ್ಯೆಗೆ ಈ ಎಲೆಗಳು ಒಂದು ರೀತಿಯಲ್ಲಿ ಉತ್ತಮ ಪರಿಹಾರ ನೀಡುತ್ತವೆ. ಒಂದು ಪಾತ್ರೆಯಲ್ಲಿ ಮುಕ್ಕಾಲು ಭಾಗ ನೀರನ್ನು ತೆಗೆದುಕೊಳ್ಳಿ. ಈ ಎಲೆಗಳ ಪೇಸ್ಟ್ ತಯಾರಿಸಿ ಆ ನೀರಿಗೆ ಹಾಕಿ ಆ ನೀರು ಅರ್ಧದಷ್ಟು ಕಡಿಮೆಯಾಗುವ ವರೆಗೆ ನೀರನ್ನು ಚೆನ್ನಾಗಿ ಕುದಿಸಿ. ಬಳಿಕ ಇದನ್ನು ಸೋಸಿಕೊಂಡು ಪ್ರತಿದಿನ ರಾತ್ರಿ ಮಲಗುವ ಮೊದಲು ಈ ನೀರನ್ನು ಕುಡಿಯಿರಿ. ಇದು ನಿಮಗೆ ನಿದ್ರಾಹೀನತೆಯಿಂದ ಮುಕ್ತಿ ನೀಡುತ್ತದೆ. ರಾತ್ರಿ ಒಳ್ಳೆಯ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
  • ನೀವು ಕಜ್ಜಿ ಮತ್ತು ಎಸ್ಜಿಮಾದಂತಹ ಚರ್ಮ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರೆ, ದಾಳಿಂಬೆ ಎಲೆಗಳ ಪೇಸ್ಟ್ ಅನ್ನು ಹಚ್ಚುವುದರಿಂದ ಅದು ಗುಣವಾಗುತ್ತದೆ. ಇದಲ್ಲದೆ, ದೇಹದ ಮೇಲಿನ ಹುಣ್ಣುಗಳು ಮತ್ತು ಗಾಯಗಳಿಗೆ ಇದನ್ನು ಲೇಪಿಸುವುದರಿಂದ ಬೇಗನೆ ಕಡಿಮೆಯಾಗುತ್ತವೆ.
  • ಕಿವಿ ಮತ್ತು ನೋವಿನ ಸೋಂಕಿನಿಂದ ಬಳಲುತ್ತಿರುವವರು ದಾಳಿಂಬೆ ಎಲೆಗಳನ್ನು ಜಜ್ಜಿ ಅದರ ರಸ ತೆಗೆದು, ಅದಕ್ಕೆ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬೆರೆಸಿ, ಈ ಮಿಶ್ರಣದ ಎರಡು ಹನಿಗಳನ್ನು ಎರಡೂ ಕಿವಿಗಳಲ್ಲಿ ಹಾಕಿ. ಈ ರೀತಿ ಮಾಡುವುದರಿಂದ ಕಿವಿ ನೋವು ಮತ್ತು ಸೋಂಕುಗಳು ಇದ್ದಲ್ಲಿ ಕಡಿಮೆಯಾಗುತ್ತವೆ.
  • ಯಾರಿಗಾದರೂ ಬಾಯಿಯ ದುರ್ವಾಸನೆ, ಒಸಡು ಸಮಸ್ಯೆ, ಬಾಯಿಯಲ್ಲಿ ಹುಣ್ಣುಗಳಿದ್ದರೆ, ದಾಳಿಂಬೆ ಎಲೆಗಳ ರಸವನ್ನು ನೀರಿನೊಂದಿಗೆ ಬೆರೆಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿ. ಈ ರೀತಿ ಮಾಡುವುದರಿಂದ ಬಾಯಿಗೆ ಸಂಬಂಧ ಪಟ್ಟ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
  • ಅಲ್ಲದೆ ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಲು ದಾಳಿಂಬೆ ಎಲೆಗಳಿಂದ ಪೇಸ್ಟ್ ತಯಾರಿಸಿ ಅದನ್ನು ಮೊಡವೆಗಳ ಮೇಲೆ ಹಚ್ಚುವುದರಿಂದ ಮುಖ ಕಲೆ ರಹಿತವಾಗುತ್ತದೆ.

 

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!