ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಗದಗ ಜಿಲ್ಲಾ ಗೌರವ ಅಧ್ಯಕ್ಷರು ಹಾಗೂ ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ತಾಲೂಕು ಅಧಿಕಾರಿಗಳಾಗಿರುವ ಡಾ. ಬಸವರಾಜ ಬಳ್ಳಾರಿ ಅವರ ಜನ್ಮದಿನದ ನಿಮಿತ್ತ ಅವರ ಶಿಷ್ಯ ಬಳಗ ಸನ್ಮಾನಿಸಿ, ಗೌರವಿಸಿ, ಶುಭವನ್ನು ಕೋರಿತು. ಈ ಸಂದರ್ಭದಲ್ಲಿ ಹನುಮಂತ ನಾಗರಹಳ್ಳಿ, ಕರೀಮಸಾಬ ಸುಣಗಾರ, ಪತ್ರಕರ್ತ ಸುನೀಲಸಿಂಗ್ ಲದ್ದಿಗೇರಿ, ಹನುಮಂತ ವಡ್ಡರ, ನಾಗರಾಜ ಜಂಗ್ಲಿ, ಶಂಕರ ವಡ್ಡರ, ಶರಣಪ್ಪ ವಡ್ಡರ, ಸುರೇಂದ್ರಸಿಂಗ್ ಕಾಟೇವಾಲ ಮುಂತಾದವರಿದ್ದರು.