ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ನೆಹರು ಯುವ ಕೇಂದ್ರ ಗದಗ ಮತ್ತು ಶ್ರೀ ಎಫ್.ಬಿ. ಪೂಜಾರ್ ಸರಕಾರಿ ಪದವಿಪೂರ್ವ ಕಾಲೇಜು, ರಾಷ್ಟಿçÃಯ ಸೇವಾ ಯೋಜನೆ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಸವರಾಜ್ ಮ.ಕೊಂಚಿಗೇರಿ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಏಕತೆಗಾಗಿ ಓಟ ಮತ್ತು ಸಂಕಲ್ಪ @2047 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭೂದಾನಿಗಳಾದ ವೈದ್ಯ ಚನ್ನವೀರಪ್ಪ ಕೊಂಚಿಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಕನಕಮ್ಮ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಲಹೆಗಳನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ತಿಪ್ಪಣ್ಣ ಕೊಂಚಿಗೇರಿ, ಹೇಮಾ ಹರ್ಲಾಪುರ, ಸಂಗಮೇಶ ನೀರಲಗಿ, ವೀರೇಂದ್ರ ಗೌಡ ಪಾಟೀಲ್, ಈರಯ್ಯ ಪಾಟೀಲ್, ಸಿದ್ಧಲಿಂಗ ಅಂಗಡಿ, ಬಸವರಾಜ್ ಗಿರಿತಮ್ಮನವರ್, ಕೊಟ್ರಯ್ಯ ಹೊಂಬಾಲಮಠ, ರವಿಕುಮಾರ್ ಹೊಂಬಾಳಿ ಪಾಲ್ಗೊಂಡಿದ್ದರು.
ಲಿAಗರಾಜ್ ಯತ್ನಹಳ್ಳಿ ಸ್ವಾಗತಿಸಿದರೆ, ಶರಣಪ್ಪ ಕಲಗುಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಜ್ಯೋತಿ ಅಡವಿ ವಂದಿಸಿದರು. ಪರಸಪ್ಪ ತಳವಾರ್, ಮಂಜುನಾಥ್ ಹಾರ್ಲಾಪುರ, ರವಿ ನರೇಗಲ್ ಸೇರಿದಂತೆ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.



