HomeCrime Newsಗಜೇಂದ್ರಗಡ ತಾಲೂಕಿನಲ್ಲಿ ಅಮಾನವೀಯ ಘಟನೆ: ಒಂಬತ್ತು ತಿಂಗಳ ಮೊಮ್ಮಗನನ್ನೇ ಕೊಂದ ಪಾಪಿ ಅಜ್ಜಿ..!?

ಗಜೇಂದ್ರಗಡ ತಾಲೂಕಿನಲ್ಲಿ ಅಮಾನವೀಯ ಘಟನೆ: ಒಂಬತ್ತು ತಿಂಗಳ ಮೊಮ್ಮಗನನ್ನೇ ಕೊಂದ ಪಾಪಿ ಅಜ್ಜಿ..!?

For Dai;y Updates Join Our whatsapp Group

Spread the love

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ಒಂಬತ್ತು ತಿಂಗಳ ಗಂಡು ಮಗುವನ್ನು ಅಜ್ಜಿಯೇ ಕೊಲೆಗೈದು ಹೂತು ಹಾಕಿರುವ ಅಮಾನವೀಯ ಘಟನೆ ಜರುಗಿದೆ.

ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಅದ್ವೀಕ‌ ಎಂಬ ಒಂಬತ್ತು ತಿಂಗಳ ಮಗುವನ್ನು ಸ್ವಂತ ಅಜ್ಜಿ ಸರೋಜಾ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

ಕೊಲೆಗೀಡಾದ ಮಗುವಿನ ತಾಯಿ ನಾಗರತ್ನಳಿಂದ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ರೋಣ ತಾಲೂಕಿನ ಜಕ್ಕಲಿ ಗ್ರಾಮದ ನಾಗರತ್ನ ಹಾಗೂ ಪುರ್ತಗೇರಿ ಗ್ರಾಮದ ಕಳಕೇಶ ಗೂಳಿ ನಡುವೆ 6-11- 2021 ರಲ್ಲಿ ಮದುವೆ ಆಗಿತ್ತು. 25-02-2023 ರಂದು ನಾಗರತ್ನ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಐದು ತಿಂಗಳ ನಂತರ ತವರು ಮನೆಯಿಂದ ಪುರ್ತಗೇರಿಗೆ ಬಂದ ನಂತರ ನಾಗರತ್ನಳಿಗೆ ಅತ್ತೆ ಸರೋಜಾ ಗಂಡು ಮಗುವಾಗಿದ್ದಕ್ಕೆ ಸೇರುತ್ತಿರಲಿಲ್ಲ ಎನ್ನಲಾಗಿದೆ. ನಾಗರತ್ನಳಿಗೆ ಗಂಡು ಮಗುವಾಗಿದ್ದಕ್ಕೆ ಸದ್ಯಕ್ಕೆ ಮಗು ಬೇಡವಾಗಿತ್ತು ಅಂತ ಸಿಟ್ಟಾಗಿ ಮಾತನಾಡುತ್ತಿದ್ದಳು.

ಮೊನ್ನೆ ನವೆಂಬರ್ 22 ರಂದು ನಾಗರತ್ನ ಮನೆಗೆಲಸ ಮಾಡುತ್ತಿದ್ದಾಗ ಅತ್ತೆ ಸರೋಜಾ ಮೊಮ್ಮಗ ಅದ್ವಿಕ್‌ನಿಗೆ ತುಂಬಿನ ಸಮೇತ ಎಲೆ ಹಾಗೂ ಅಡಿಕೆ ಹೋಳು ತಿನಿಸಲು ಮುಂದಾದಾಗ ನಾಗರತ್ನ, ಅದನ್ನೇಕೆ ತಿನಿಸುತ್ತಿದ್ದೀರಿ ಎಂದ ಮಗುವಿನ ಬಾಯಿಂದ ಅದನ್ನು ತೆಗೆದಿದ್ದಾಳೆ.

ನಂತರ ಜಮೀನಿಗೆ ಹೋಗಿ ಹುಲ್ಲು, ಗಡ್ಡೆ ಮೇವು ಕೊರೆದು,‌ ನೀರು ಕುಡಿಸಿ ಬಾ ಎಂದು ಅತ್ತೆ ಸರೋಜಾ ಹೇಳಿ ಕಳಿಹಿಸಿದ್ದು, ನಂತರ ಅದೇ ದಿನ ಸಂಜೆ ನಾಲ್ಕು ಗಂಟೆಗೆ ಅದ್ವಿಕ್ ನಿಗೆ ಏನೂ ತಿನ್ನಿಸಿ ಉಸಿರು ಗಟ್ಟಿಸಿ ಕೊಲೆ ಮಾಡಿ, ತಮ್ಮ ತೋಟದಲ್ಲಿ ಮಣ್ಣು ಮಾಡಿ, ಸಾಕ್ಷಿ, ಪುರಾವೆ ನಾಶ ಮಾಡಿದ್ದಾರೆ ಎಂದು ನಾಗರತ್ನ ಗಜೇಂದ್ರಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಲರ್ಟ್ ಆದ ಪೊಲೀಸರು

ಒಂಬತ್ತು ತಿಂಗಳು ಮಗುವಿನ ಕೊಲೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ರೋಣ ಸಿಪಿಐ ಎಸ್.ಎಸ್ ಬೀಳಗಿ ಹಾಗೂ ಪೊಲೀಸರು, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯಕ್ ನೇತೃತ್ವದಲ್ಲಿ ಮಗುವಿನ ಶವ ಹೊರತಗೆದು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ C/no-186/2023 IPC 1860(u/s 498a,201,302 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!