ಗದಗ: ನಗರದ ಬಸವೇಶ್ವರ ದೇವಸ್ಥಾನದಲ್ಲಿ “ ಬೇಡಿದ ವರ ಕೊಡುವ ಕಾಮಣ್ಣ” ಎಂದೇ ಪ್ರಸಿದ್ಧಿಯಾಗಿರುವ ಮುಳ್ಳ ಅಗಸಿಯ 173ನೇ ವರ್ಷದ ಕಾಮ–ರತಿ ಮೂರ್ತಿ ಪ್ರತಿಷ್ಠಾಪನೆ ಮಂಗಳವಾರ ಭಕ್ತಿ ಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಪ್ರತಿಷ್ಠಾಪನೆ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನ ಆವರಣದಲ್ಲಿ ಭಕ್ತರ ಸಂಭ್ರಮ ಮನೆಮಾಡಿತ್ತು. ಹರ್ಷೋದ್ಗಾರಗಳ ನಡುವೆ ಕಾಮ–ರತಿ ಮೂರ್ತಿಗಳನ್ನು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ವಿವಿಧ ವಾದ್ಯಗೋಷ್ಠಿಗಳ ನಾದ, ಭಕ್ತರ ಜಯಘೋಷಗಳ ಮಧ್ಯೆ ಮೂರ್ತಿಗಳು ದೇವಸ್ಥಾನಕ್ಕೆ ಆಗಮಿಸಿದವು.
“ಬೇಡಿದ ವರ ಕೊಡುವ ಕಾಮಣ್ಣ” ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಳ್ಳ ಅಗಸಿಯ ಕಾಮಣ್ಣನಿಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಸ್ಥಳೀಯರ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಆಗಮಿಸಿ ಹರಕೆ ಸಲ್ಲಿಸಿದರು.
ಮೂರ್ತಿಗಳಿಗೆ ವಿಭಿನ್ನ ಬಗೆಯ ಹೂಗಳಿಂದ ತೋರಣ ಅಲಂಕಾರ, ದೀಪಾಲಂಕಾರ ಹಾಗೂ ಆಕರ್ಷಕ ವಸ್ತ್ರಾಭರಣಗಳಿಂದ ವಿಶೇಷ ಸಿಂಗಾರ ಮಾಡಲಾಗಿತ್ತು. ವೇದ ಮಂತ್ರೋಚ್ಚಾರಣೆಯ ಮಧ್ಯೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಮತ್ತು ವಿವಿಧ ನಿವೇದನಗಳನ್ನು ಅರ್ಪಿಸಿ ಪ್ರತಿಷ್ಠಾಪನೆ ವಿಧಿವಿಧಾನಗಳು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನಿಂಗಪ್ಪ ಪಡಗದ, ವೀರನಗೌಡ ಮರಿಗೌಡರ, ತೋಟಯ್ಯ ವಿಭೂತಿಮಠ, ಸಿದ್ದರಾಮಪ್ಪ ಹುಂಬಿ, ಮಂಜುನಾಥ ಲಕ್ಕುಂಡಿ, ಎಫ್.ವಿ. ಮರಿಗೌಡ್ರ, ಪ್ರಶಾಂತ ಶಾಬಾದಿಮಠ, ಸೋಮಪ್ಪ ಪುರದ, ಶಂಕರ ಕರಬಿಷ್ಠಿ, ರಮೇಶ ಸಂಕಣ್ಣವರ, ಸಿದ್ಧಲಿಂಗೇಶ ಸಂಗನಾಳ, ಪ್ರಶಾಂತ ಮುದೇಗೊಣ್ಣವರ,
ಗಂಗಾಧರ ಕೊಪ್ಪದ, ಸಿದ್ಧಲಿಂಗೇಶ ಗಾಣಿಗೇರ, ಸದಾಶಿವಯ್ಯ ಹಿರೇಮಠ, ಸಿದ್ದಲಿಂಗಗೌಡ ಉಮಚಗಿ, ಪ್ರಭು ಕಲಬಂಡಿ, ಬಸವರಾಜ ಕಬನೂರ, ಶಿವಾನಂದ ಹೂಗಾರ, ಮಂಜುನಾಥ ಲಕ್ಷಟ್ಟಿ, ಪ್ರಶಾಂತ ನೆರೇಗಲ್ಲ, ಮಂಜು ಪುರದ, ವೀರೇಶ ಸಾಲಿಮಠ, ಕಳಕಪ್ಪ ನವಲಗುಂದ, ರಾಚಪ್ಪ ಲಕ್ಕುಂಡಿ, ಈರಣ್ಣ ಗಡಗಿ, ರಾಚಪ್ಪ ಹುಂಬಿ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.



