ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಹಾಗೂ ಮರುಳಸಿದ್ಧಪ್ಪ ದೊಡ್ಡಮನಿ ಜೊತೆಗೂಡಿ ಸಂಪಾದಿಸಿದ ಪ್ರಥಮ ಶಾಯಿರಿ ಸಂಕಲನ `ನೂರ್ ಹನ್ನೊಂದು’ ಸಂಕಲನ ಲೋಕಾರ್ಪಣೆಗೊಂಡಿತು. ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ ಮಾತನಾಡಿದರು. ಅಧ್ಯಕ್ಷತೆಯನ್ನು ಚಿತ್ರದುರ್ಗದ ಹಿರಿಯ ಕವಿಗಳಾದ ಪರಮೇಶ್ವರಪ್ಪ ಕುದರಿಯವರು ವಹಿಸಿಕೊಂಡಿದ್ದರು. ಮುಖ್ಯ ಅಥಿತಿಗಳಾಗಿ ಎಸ್.ಬಿ. ಮಾಳಗೊಂಡ, ಎಂ.ಎಸ್. ಹುಲ್ಲೂರು ಪಾಲ್ಗೊಂಡಿದ್ದರು. ಶ್ರೀನಿವಾಸ ಚಿತ್ರಗಾರರು ಸ್ವಾಗತಿಸಿದರು, ಪ್ರೊ. ಬಸವರಾಜ ನೆಲಜರಿ ನಿರೂಪಿಸಿದರು. ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿಯವರು ವಂದಿಸಿದರು.



