ಗದಗ: ಕಾಲಮಿತಿಯಲ್ಲಿ ಸರಕಾರಿ ನೌಕರರ ವಿಮೆಗಳಿಗೆ ಬೋನಸ್ ಪಾವತಿಸಿದ ಧಾರವಾಡ ಜಿಲ್ಲಾ ವಿಮಾ ಅಧಿಕಾರಿ ಜೆ.ಸಿ. ಕಠಾರಿ ಅವರನ್ನು ವಿವಿಧ ಇಲಾಖೆಗಳ ಸರಕಾರಿ ನೌಕರರು ಶಾಲು ಹೊದೆಸಿ, ಸನ್ಮಾನಿಸಿ ಗೌರವಿಸಿದರು. ಜೆ.ಸಿ. ಕಠಾರಿ ಮತ್ತು ಸಿಬ್ಬಂದಿಗಳು ರಜೆ ದಿನಗಳನ್ನು ಲೆಕ್ಕಿಸದೆ, ತಡ ರಾತ್ರಿವರೆಗೂ ಕರ್ತವ್ಯ ನಿರ್ವಹಿಸಿ, ಕೇವಲ 15 ದಿನಗಳಲ್ಲಿ ಸುಮಾರು 2,150 ಸರಕಾರಿ ನೌಕರರಿಗೆ ಲಾಭಾಂಶ ಜಮೆ ಮಾಡಿದ್ದಾರೆ. ಇವರ ಪಾರದರ್ಶಕ ಮತ್ತು ನೌಕರ ಸ್ನೇಹಿ ಕರ್ತವ್ಯ ಗುರುತಿಸಿ, ಮೆಚ್ಚಿದ ವಿವಿಧ ಇಲಾಖೆಗಳ ಸರಕಾರಿ ನೌಕರರು, ಸ್ವತಃ ಕಠಾರಿ ಅವರ ಕಾರ್ಯಾಲಯಕ್ಕೆ ತೆರಳಿ ಕೃತಜ್ಞತೆಗಳನ್ನು ಸಲ್ಲಿಸಿದರು.
Trending Now



