ರಾಮನಗರ: ಕಾಡುಹಂದಿ ದಾಳಿಗೆ ಚಿರತೆ ಮರಿಗಳ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಲಕ್ಕನಹಳ್ಳಿ ಗ್ರಾಮದ ಹೊರವಲಯದಲ್ಲಿ ಬೆಳಗ್ಗಿನ ಜಾವ ನಡೆದಿದೆ. ಕಾಡಂದಿ ದಾಳಿಗೆ ಗ್ರಾಮದ ಸುತ್ತಲಿನ ಬೆಟ್ಟದಲ್ಲಿ ವಾಸವಗಿದ್ದ ಎರಡು ಗಂಡು ಚಿರತೆಗಳು ಸಾವನ್ನಪ್ಪಿವೆ.
ಆಹಾರ ಅರಸಿ ಗ್ತಾಮದತ್ತ ಬರುವ ವೇಳೆ ಚಿರತೆಗಳ ಮೇಲೆ ಕಾಡಂದಿ ದಾಳಿ ಮಾಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಚಿರತೆಗಳ ಪಶು ವೈದ್ಯಕೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ರಾಮನಗರ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



