ವಿಜಯಸಾಕ್ಷಿ ಸುದ್ದಿ, ರೋಣ: ಹಜರತ್ ಮುಹ್ಮದ ಮುಸ್ತಪಾರವರ ಜನ್ಮದಿನದ ನಿಮಿತ್ತ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅನ್ನಸಂತರ್ಪಣೆ ಮತ್ತು ಮಿಥುನ್ ಜಿ.ಪಾಟೀಲ ಯುವ ಬ್ರಿಗೇಡ್ ಲೋಗೋ ಉದ್ಘಾಟನೆ ಸಮಾರಂಭ ಸೆ.5ರಂದು ಸಂಜೆ 4ಕ್ಕೆ ಆಝಾದ ಸಂಕೀರ್ಣದ ಬಳಿ ಜರುಗಲಿದೆ.
ಸಮಾರಂಭದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಯುವ ಮುಖಂಡ ಅಸ್ಲಂ ಕೊಪ್ಪಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



