ವಿಜಯಸಾಕ್ಷಿ ಸುದ್ದಿ, ಮುಳಗುಂದ : ದಾವಲ ಮಲ್ಲಿಕ ಪಹಾಡ ಪ್ರಾಥಮಿಕ ಉರ್ದು ಶಾಲೆಯ ಶಿಕ್ಷಕರಾದ ಶಂಕ್ರಪ್ಪ ನೇರೆಗಲ್ರ ಸುಪುತ್ರ ಹರ್ಷ ನರೇಗಲ್ ಭಾರತೀಯ ಸೇನೆಗೆ ಆಯ್ಕೆಯಾಗಿ ತರಬೇತಿ ಪಡೆದಿರುವ ನಿಮಿತ್ತ ದಾವಲ್ ಮಲಿಕ್ ಪಾಹಾಡ್ ದರ್ಗಾ ಸಹಯೋಗದಲ್ಲಿ ಖದ್ಮತ ಏ ಮಿಲ್ಲತ್ ಗ್ರೂಪ್ ವತಿಯಿಂದ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಹಿರಿಯರಾದ ತಾಜುದ್ದಿನ ಕಿಂಡ್ರಿ ಮಾತನಾಡಿ, ಅವರ ತಂದೆ ಒಬ್ಬ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ತಮ್ಮ ಮಗನನ್ನು ದೇಶ ಸೇವೆಗೆ ಸಮರ್ಪಿಸಲು ನಿರ್ಧರಿಸಿದ್ದು ಸಂತೋಷದ ವಿಷಯ ಎಂದರು. ಈ ಸಂರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಜಾಫರ ಮುಲ್ಲಾ, ಹಿರಿಯರಾದ ಅಬ್ದುಲ್ ಹಮೀದ ಮುಜಾವರ, ಡಿ.ಡಿ. ಮುಜಾವರ, ಅಮೀನ ಮುಜಾವರ, ಮಾಬುಸಬಾನಿ ಮುಜಾವರ ಹಾಗೂ ಶಾಲಾ ಸಿಬ್ಬಂದಿವರ್ಗದವರು ಹಾಜರಿದ್ದರು.



