ಗದಗ ನಗರದ ಅಮರೇಶ್ವರ ನಗರದ ನಿವಾಸಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಯೋಧ ಶಂಕರ ಹಾದಿಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಹ ಸಂಯೋಜಕ ರಮೇಶ ಎನ್ ಸಜ್ಜಗಾರ, ಕೆಇಬಿ ನೌಕರ ಲಕ್ಷ್ಮಣ ಹುಗ್ಗೆಣ್ಣವರ, ಕಾನೂನು ಪ್ರಕೋಷ್ಠದ ಸಂಚಾಲಕ ಹಾಗೂ ವಕೀಲರಾದ ಕೆ.ಪಿ. ಕೊಟಿಗೌಡರ, ವಕೀಲರಾದ ಮಂಜುನಾಥ ಶಾಂತಗೇರಿ, ಮಾಧ್ಯಮ ಸಂಚಾಲಕ ರಾಜು ಹೊಂಗಲ ಮುಂತಾದವರು ಉಪಸ್ಥಿತರಿದ್ದು ಶುಭ ಕೋರಿದರು.