HomeGadag Newsಕರಪತ್ರದಲ್ಲಿ ಮುದ್ರಕರ ಹೆಸರು, ವಿಳಾಸ ಕಡ್ಡಾಯ

ಕರಪತ್ರದಲ್ಲಿ ಮುದ್ರಕರ ಹೆಸರು, ವಿಳಾಸ ಕಡ್ಡಾಯ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಜಾಹೀರಾತು, ಮಾಹಿತಿ ಪ್ರಕಟಿಸುವವರು ಪ್ರತಿಯ ಮೇಲೆ ಪ್ರಕಾಶಕರು, ಮುದ್ರಕರ ಹೆಸರು, ವಿಳಾಸ ಹಾಗೂ ಮುದ್ರಿತ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮುದ್ರಣ ಸಂಸ್ಥೆ, ಕೇಬಲ್ ಆಪರೇಟರ್ ಹಾಗೂ ಚಲನಚಿತ್ರ ಮಂದಿರಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಸ್ಲಿಪ್, ಅಭ್ಯರ್ಥಿಯ ಹೆಸರು ಮತಹಾಕಿ ಎನ್ನುವ ಮಾಹಿತಿ ವಿಷಯದ ಮುದ್ರಣಕ್ಕೆ ಜಿಲ್ಲಾ ಎಂಸಿಎಂಸಿ ಸಮಿತಿಯ ಪೂರ್ವಾನುಮತಿ ಅವಶ್ಯಕವಿಲ್ಲ. ಆದರೆ ಮುದ್ರಿಸಿದ ವಿಷಯದ ಪ್ರತಿ ಹಾಗೂ ವೆಚ್ಚದ ವಿವರವನ್ನು ಎಂಸಿಎಂಸಿ ಸಮಿತಿಗೆ ಸಲ್ಲಿಸಬೇಕು. ಅಭ್ಯರ್ಥಿಯ ಸಾಧನೆಯ ಕುರಿತು ಕಿರುಹೊತ್ತಿಗೆ, ಕರಪತ್ರ ಮುದ್ರಣದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗವುಂತಹ ವಿಷಯಗಳನ್ನು ಮುದ್ರಿಸಬಾರದು. ನಿಯಮ ಉಲ್ಲಂಘನೆಯಾದಲ್ಲಿ ಅಂತಹ ಮುದ್ರಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಟಿ.ವಿ., ಕೇಬಲ್ ನೆಟ್‌ವರ್ಕ್, ರೇಡಿಯೋ, ಸಾಮಾಜಿಕ ಜಾಲತಾಣ, ಇ-ಪೇಪರ್ ಮೂಲಕ ಚುನಾವಣಾ ಜಾಹೀರಾತು ನೀಡುವವರು ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಗಳಾಗಿದ್ದಲ್ಲಿ ಕನಿಷ್ಟ ಮೂರು ದಿನ ಮುಂಚಿತವಾಗಿ, ಸಂಘ ಸಂಸ್ಥೆಗಳಿದ್ದಲ್ಲಿ ಕನಿಷ್ಠ ೭ ದಿನಗಳ ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಮಂಜೂರಾತಿಗೆ ಅರ್ಜಿ ಸಲ್ಲಿಸಬೇಕು ಎಂದರು.
ಅರ್ಜಿ ನಮೂನೆಯಲ್ಲಿ ಎಲ್ಲ ಅವಶ್ಯಕ ವಿವರ ಮತ್ತು ಜಾಹೀರಾತು ವಿಷಯದ ಎಲೆಕ್ಟ್ರಾನಿಕ್ ಟ್ರಾನ್ಸ್‌ಸ್ಕ್ರಿಪ್ಷನ್ ಹಾಗೂ ಆ ವಿಷಯದ ಸಂಪೂರ್ಣ ವಿವರದ ಧೃಡೀಕೃರಿಸಿದ ಸ್ಕ್ರಿಪ್ಟ (ಬರವಣಿಗೆ ರೂಪದಲ್ಲಿ) ತಲಾ ಎರಡು ಪ್ರತಿಗಳನ್ನು ಸಲ್ಲಿಸಬೇಕು. ಈ ಜಾಹೀರಾತಿನ ತಯಾರಿಕಾ ವೆಚ್ಚ ತಿಳಿಸಬೇಕು.
ಟಿ.ವಿ. ಕೇಬಲ್, ಸಾಮಾಜಿಕ ಜಾಲತಾಣ, ರೇಡಿಯೋ, ಇ-ಪೇಪರ್‌ಗಳ ಪ್ರದರ್ಶನ ವೆಚ್ಚ ಹಾಗೂ ವೇಳಾಪಟ್ಟಿಯನ್ನು ವಿವರವಾಗಿ ನೀಡಬೇಕು. ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಯು ಪ್ರಯೋಜನಕ್ಕೆ ಜಾಹೀರಾತನ್ನು ಬಳಸಿಕೊಳ್ಳುತ್ತಿರುವ ಪ್ರಮಾಣಪತ್ರ ಸಲ್ಲಿಸಬೇಕು. ಜಾಹೀರಾತುಗಳ ವೆಚ್ಚವನ್ನು ಚೆಕ್ ಅಥವಾ ಡಿಡಿ ಮೂಲಕ ಪಾವತಿಸುವುದಾಗಿ ಅರ್ಜಿದಾರರು ಪ್ರಮಾಣೀಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಆನಂದ್ ಕೆ. ಮಾತನಾಡಿ, ಮುದ್ರಕರು ಪ್ರಚಾರ ಸಾಮಗ್ರಿ ಮುದ್ರಣದಲ್ಲಿ ಪರಿಸರ ಸ್ನೇಹಿ ಸಾಮಗ್ರಿಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ವಿವಿಧ ಮುದ್ರಣ ಸಂಸ್ಥೆಗಳ ಮಾಲಕರು, ಪ್ರತಿನಿಧಿಗಳು, ಕೇಬಲ್ ಆಪರೇಟರ್‌ಗಳು, ಚಲನಚಿತ್ರ ಮಂದಿರದ ಪ್ರತಿನಿಧಿಗಳು, ವಾರ್ತಾಧಿಕಾರಿ ವಸಂತ ಮಡ್ಲೂರ, ಜಿಲ್ಲಾಧಿಕಾರಿ ಚುನಾವಣಾ ವಿಭಾಗದ ಅಧಿಕಾರಿ ಸಿಬ್ಬಂದಿ ಮತ್ತಿತರರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!