ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಬಿಟಿ ಹತ್ತಿ ಬೆಳೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿ ಯೊಬ್ಬನನ್ನು ಮುಳಗುಂದ ಪೊಲೀಸರು ಬಂಧಿಸಿದ್ದಾರೆ.
ಚನ್ನಪ್ಪ ನಾಗಪ್ಪ ಆರೇರ್ ಎಂಬಾತನೇ ಬಂಧಿತ ಆರೋಪಿ. ಮುಳಗುಂದ ಸಮೀಪದ ಯಲಿಶಿರುಂದ ರಸ್ತೆಯಲ್ಲಿ ಇರುವ ತನ್ನ ಜಮೀನಿನಲ್ಲಿ ಕಳೆದ ಹಲವು ದಿನಗಳಿಂದ ಬಿಟಿ ಹತ್ತಿ ಬೆಳೆಯ ಮಧ್ಯ ಈ ಗಾಂಜಾ ಗಿಡಗಳನ್ನು ಬೆಳೆದಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಪಡೆದ ಮುಳಗುಂದ ಪೊಲೀಸರು ದಾಳಿ ನಡೆಸಿ 17 ಸಾವಿರ ರೂ ಮೌಲ್ಯದ ಗಾಂಜಾಗಿಡಗಳನ್ನು ಜಪ್ತಿ ಮಾಡಿದ್ದಾರೆ.
ಪಿಎಸ್ಐ ಸಚಿನ್ ಅಲಮೇಲಕರ್, ಎಎಸ್ ಐ ಎ ಕೆ ಮಾಳವಾಡ, ಸಿಬ್ಬಂದಿಗಳಾದ ಎಚ್ ಐ ಕಲ್ಲಣ್ಣವರ್, ಪ್ರಭಯ್ಯ ಕೊಡಬಾಳಮಠ, ಬಿ ಸಿ ಕೋಳಿವಾಡ, ಎನ್ ಎನ್ ದಳವಾಯಿ, ಡಿ ಐ ತಹಸೀಲ್ದಾರ ಈ ಕಾರ್ಯಾಚರಣೆಯಲ್ಲಿ ಇದ್ದರು.