HomeGadag Newsಜಿಲ್ಲೆಯಲ್ಲಿ ಶನಿವಾರ 49 ಜನರಿಗೆ ಸೋಂಕು; 206 ಜನ ಗುಣಮುಖ

ಜಿಲ್ಲೆಯಲ್ಲಿ ಶನಿವಾರ 49 ಜನರಿಗೆ ಸೋಂಕು; 206 ಜನ ಗುಣಮುಖ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಶನಿವಾರ ದಿ 12 ರಂದು 49 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

49 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7359 ಕ್ಕೇರಿದೆ. ಶನಿವಾರ 206 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6077 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 1177 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಶನಿವಾರದ ಮಾಹಿತಿಯಂತೆ ಒಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 105 ಕ್ಕೇರಿದೆ.

ಗದಗ-23, ಮುಂಡರಗಿ-12, ನರಗುಂದ-02, ರೋಣ-03, ಶಿರಹಟ್ಟಿ-01, ಹೊರ ಜಿಲ್ಲೆಯ 08 ಪ್ರಕರಣ ಸೇರಿದಂತೆ ಒಟ್ಟು 49 ಜನರಿಗೆ ಸೋಂಕು ದೃಢಪಟ್ಟಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಆಶ್ರಯ ಕಾಲೋನಿ, ಕೆ.ಸಿ.ರಾಣಿ ರಸ್ತೆ, ಕುಲಕರ್ಣಿ ಗಲ್ಲಿ, ಹೊಸಪೇಟ ಚೌಕ, ಬಜಾರ ರಸ್ತೆ, ಜಿಮ್ಸ್ ಆಸ್ಪತ್ರೆ, ಕಾಶಿ ವಿಶ್ವನಾಥ ನಗರ, ಜವಳ ಗಲ್ಲಿ, ಹಾತಲಗೇರಿ ರಸ್ತೆ, ಬಸ್ ನಿಲ್ದಾಣದ ಹತ್ತಿರ, ಸರ್ವೋದಯ ಕಾಲೋನಿ, ಬಸವನ ಬಾವಿ ಓಣಿ, ಗದಗ ತಾಲೂಕಿನ ಹೊಂಬಳ, ಮುಳಗುಂದ, ಹಲಗಲಿ, ಹರ್ತಿ, ನಾಗಾವಿ, ಕಿರಟಗೇರಿ.

ಮುಂಡರಗಿ ಪಟ್ಟಣ, ಮುಂಡರಗಿ ತಾಲೂಕಿನ ರಾಮೇನಹಳ್ಳಿ, ಹಿರೇವಡ್ಡಟ್ಟಿ, ವೆಂಕಟಾಪುರ, ನರಗುಂದ ಪಟ್ಟಣದ ಹೊಸೂರ ಓಣಿ, ನರಗುಂದ ತಾಲೂಕಿನ ದಂಡಾಪುರ, ರೋಣ ತಾಲೂಕಿನ ಸೂಡಿ, ಬೊಮ್ಮಸಾಗರ, ಜಕ್ಕಲಿ ರಸ್ತೆ, ಶಿರಹಟ್ಟಿ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!