HomeCrime Newsಲಕ್ಷ ರೊಕ್ಕದ ಅಂದರ್-ಬಾಹರ್: 10 ಮಂದಿ ಬಂಧನ, ಗಡಿ ದಾಟಿ ಆಡಲು ಬಂದು ಸಿಕ್ಕವರು ಯಾರು...

ಲಕ್ಷ ರೊಕ್ಕದ ಅಂದರ್-ಬಾಹರ್: 10 ಮಂದಿ ಬಂಧನ, ಗಡಿ ದಾಟಿ ಆಡಲು ಬಂದು ಸಿಕ್ಕವರು ಯಾರು ಗೊತ್ತಾ?

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಲಕ್ಷದ ಲೆಕ್ಕದಲ್ಲಿ ಅಂದರ್-ಬಾಹರ್ ಆಡುತ್ತಿದ್ದ 10 ಜನರನ್ನು ರೋಣ ಪೊಲೀಸರು ಬಂಧಿಸಿ, ಸ್ಟೇಷನ್‌ಬೇಲ್ ಬಿಡುಗಡೆ ಮಾಡಿದ್ದಾರೆ. ಹೊಳೆ ಆಲೂರಿನ ಎಪಿಎಂಸಿ ಆವರಣದಲ್ಲಿ ಬಸವರಾಜ ಹನುಮಂತಪ್ಪ ಸಂಗಟಿಯವರ ದಲಾಲಿ ಅಂಗಡಿ ಮುಂದೆ ನಡೆಯುತ್ತಿದ್ದ ಇಸ್ಪೀಟು ಅಡ್ಡೆಯ ಮೇಲೆ ರೋಣ ಪಿಎಸ್‌ಐ ವಿನೋದ ಪೂಜಾರಿ ನೇತೃತ್ವದಲ್ಲಿ ರೋಣ ಪೊಲೀಸರು ದಾಳಿ ಮಾಡಿ 1 ಲಕ್ಷ 16 ಸಾವಿರ 870 ರೂ. ವಶಪಡಿಸಿಕೊಂಡಿದ್ದಾರೆ.

ಕೆ ಪಿ ಆ್ಯಕ್ಟ್ 87ರ ಕಲಂ ಅಡಿ ಕೇಸು ದಾಖಲಿಸಿದ್ದಾರೆ. ಪಕ್ಕದ ಜಿಲ್ಲೆಯವರು, ದೂರದೂರಿನವರು ಈ ‘ದೊಡ್ಡ ಆಟ’ದಲ್ಲಿ ಅತಿಥಿ ಆಟಗಾರರಾಗಿ ಪಾಲ್ಗೊಂಡಿದ್ದರು. ಸಿಕ್ಕಿರುವ ಮೊತ್ತ ನೋಡಿದರೆ ಇದು ‘ಫಂಡ್’ ಆಟವೇ ಇರಬಹುದು ಎನ್ನಲಾಗಿದೆ.

‘ದೊಡ್ಡಾಟ’ದಲ್ಲಿ
ರೋಣ ತಾಲೂಕಿನ ಕರ್ಕಿಕಟ್ಟಿಯ ಪ್ರಕಾಶ ಶ್ರೀಶೈಲಪ್ಪ ಚಂದಣ್ಣವರ್, ಶರಣಪ್ಪ ಬಸಪ್ಪ ಗೋಡಿ, ಸುಭಾಷಚಂದ್ರ ಬಸಪ್ಪ ಸವದತ್ತಿ, ಹೊಳೆಮಣ್ಣೂರಿನ ಶಿವಾನಂದ ದ್ಯಾಮಪ್ಪ ಹಟ್ಟಿ,  ಹೊಳೆ ಆಲೂರಿನ ಚಂದ್ರಶೇಖರ ಬಸಯ್ಯ ಮುಳಗುಂದಮಠ, ಬಸವರಾಜ ಹನುಮಂತಪ್ಪ ಸಂಗಟಿ, ಅಮರೇಗೌಡ ವೀರನಗೌಡ ಪಾಟೀಲ್, ಶರಣಪ್ಪ ಬಸಪ್ಪ ಕಡಬಲಕಟ್ಟಿ, ನರಗುಂದ ತಾಲೂಕಿನ ಹದ್ಲಿಯ ಹನುಮಂತಗೌಡ ಕಳಕನಗೌಡ ಹಿರೇಗೌಡ್ರ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೆಬ್ಬಳ್ಳಿಯ ಶಿವನಗೌಡ ಬಸನಗೌಡ ಗಡ್ಡಿಗೌಡ್ರ ಸಿಕ್ಕಿಬಿದ್ದಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!