Home Blog

ದೇಶದ ರಕ್ಷಣೆಗಾಗಿ ಮತ ಚಲಾಯಿಸಿ : ವೆಂಕಟೇಶಯ್ಯ

0

ವಿಜಯಸಾಕ್ಷಿ ಸುದ್ದಿ, ಗದಗ : 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತಮ್ಮ ಆಡಳಿತ ಅವಧಿಯಲ್ಲಿ ಸ್ಲಂ ನಿವಾಸಿಗಳಿಗೆ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ.

ಸ್ಲಂ ಜನರ ಭೂಮಿಯನ್ನು ಸಾರ್ವಜನಿಕ ಸಂಪನ್ಮೂಲವೆಂದು ಘೋಷಿಸಿದ ನರೇಂದ್ರ ಮೋದಿಯವರ ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವ ಹುನ್ನಾರ ನಡೆಸಿದೆ. ನಮ್ಮ ದೇಶದ ಸಂವಿಧಾನ ಮತ್ತು ದೇಶದ ರಕ್ಷಣೆಗಾಗಿ ಸ್ಲಂ ಜನರು ಮತ ಚಲಾಯಿಸಬೇಕೆಂದು ಗದಗ ಜಿಲ್ಲಾ ಡಿಎಸ್‌ಎಸ್ ಸಂಚಾಲಕ ವೆಂಕಟೇಶಯ್ಯ ಕರೆ ನೀಡಿದರು.

ಅವರು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ಲೋಕಸಭಾ ಚುನಾವಣೆ-2024ರ ಸ್ಲಂ ಜನರ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ಬಡವರಿಗೆ ಉಪಯೋಗವಾಗುವ ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರದೇ ಕೇಂದ್ರ ಸರ್ಕಾರ ಕೇವಲ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡುವಂತ ಕೆಲಸವನ್ನು ಮಾಡಿದೆ ಎಂದರು.

ಪ್ರಗತಿಪರ ಚಿಂತಕ ಬಸವರಾಜ ಪೂಜಾರ ಮಾತನಾಡಿದರು. ಸ್ಲಂ ಸಮಿತಿ ಪದಾಧಿಕಾರಿಗಳಾದ ರವಿಕುಮಾರ ಬೆಳಮಕರ, ಅಶೋಕ ಕುಸಬಿ, ಮೆಹರುನಿಸಾ ಢಾಲಾಯತ, ಇಬ್ರಾಹಿಮ ಮುಲ್ಲಾ, ಶಿವಾನಂದ ಶಿಗ್ಲಿ, ಸಾಕ್ರುಬಾಯಿ ಗೋಸಾವಿ, ಮೆಹಬೂಬಸಾಬ ಬಳ್ಳಾರಿ, ಬಾಷಾಸಾಬ ಡಂಬಳ, ದಾದು ಗೋಸಾವಿ, ಖಾಜಾಸಾಬ ಇಸ್ಮಾಯಿಲನವರ, ಶಿವಪ್ಪ ಲಕ್ಕುಂಡಿ, ಸಲೀಮ ಬೈರಕದಾರ, ಚಂದ್ರಿಕಾ ರೋಣದ, ಅಫ್ರೋಜಾ ಹುಬ್ಬಳ್ಳಿ, ಶೊಸೀಲಮ್ಮ ಗೊಂದರ, ಫೈರುಜಾ ಹುಬ್ಬಳ್ಳಿ, ಮೆಹರುನಿಸಾ ಡಂಬಳ, ತಿಪ್ಪಮ್ಮ ಕೊರವರ, ಕೌಸರ ಬೈರಕದಾರ, ವಿಶಾಲಕ್ಷಿ ಹಿರೇಗೌಡ್ರ, ನಗೀನಾ ಯಲಗಾರ, ಪೀರಮ್ಮ ನದಾಫ, ಜೈತುನಬಿ ಶಿರಹಟ್ಟಿ, ಲಕ್ಷ್ಮಿ ಮಣವಡ್ಡರ, ಶೋಭಾ ಹಿರೇಮಠ, ಮಕ್ತುಮಸಾಬ ಮುಲ್ಲಾನವರ ಮುಂತಾದವರಿದ್ದರು.

ಸುಭದ್ರ ದೇಶ ನಿರ್ಮಾಣಕ್ಕೆ ಮುಂದಾಗಿ : ಸುರೇಶ ಕುಂಬಾರ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿಯ ತೋಟಗಾರಿಕೆ ಮತ್ತು ಕೃಷಿ ಇಲಾಖೆ ವತಿಯಿಂದ ಮತದಾನ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕ ಸುರೇಶ ಕುಂಬಾರ, ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶ ನಮ್ಮದಾಗಿದ್ದು, ದೇಶದಲ್ಲಿಯ ಜನತೆಗೆ ಸಂವಿಧಾನವು ಮತದಾನ ಎಂಬ ವಿಶೇಷ ಹಕ್ಕನ್ನು ನೀಡಿದೆ. ಸಂವಿಧಾನ ನೀಡಿದ ಈ ಹಕ್ಕನ್ನು 18 ವರ್ಷ ವಯೋಮಿತಿ ಮೀರಿದ ಎಲ್ಲ ಅರ್ಹ ಮತದಾರರು ಮೇ.7ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೇ ಚಲಾಯಿಸಬೇಕು. ಎಲ್ಲ ಅರ್ಹ ಮತದಾರರು ಚುನಾವಣೆಯ ದಿನ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶ ನಿರ್ಮಿಸೋಣ ಎಂದರು.

ಕೃಷಿ ಇಲಾಖೆಯ ಯಲ್ಲಪ್ಪ ಬಂಗಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ನೀರಿಗಾಗಿ ಜಕ್ಕಲಿ ಗ್ರಾ.ಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5ನೇ ವಾರ್ಡಿನ ಜನತಾ ಪ್ಲಾಟ್‌ನ ನೂರಾರು ನಿವಾಸಿಗಳು ಬದು ನಿರ್ಮಾಣ ಕೆಲಸ ಮುಗಿಸಿ ಖಾಲಿ ಕೊಡ ಹಿಡಿದು ಗ್ರಾ.ಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕುಬೇರಪ್ಪ ಕೊಡಗಾನೂರ ಮಾತನಾಡಿ, ನಮ್ಮ ವಾರ್ಡಿನಲ್ಲಿ ಕಳೆದ ಆರು ತಿಂಗಳಿಂದ ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಾ ಇದ್ದೇವೆ. ಈ ಬಗ್ಗೆ ಹಲವಾರು ಬಾರಿ ಗ್ರಾ.ಪಂ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ತಕ್ಷಣವೇ ನಮಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಪಂಚಾಯಿತಿಗೆ ಆಗಮಿಸುತ್ತಿದ್ದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎಸ್.ಎಸ್. ರಿತ್ತಿ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ನಿವಾಸಿಗಳ ಸಮಸ್ಯೆಯನ್ನು ಆಲಿಸಿದ ಪಿಡಿಓ, ನಿಮಗಾದ ತೊಂದರೆಯನ್ನು ವಾರ್ಡಿನ ಸದಸ್ಯರೊಂದಿಗೆ ಮಾತನಾಡಿ ಸರಿಪಡಿಸಲು ಪ್ರಯತ್ನಿತ್ತೇನೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಬಸವ್ವ ಕೊಡಗಾನೂರ, ಸಜನಾ ಜಕ್ಕಲಿ, ಯಲ್ಲಮ್ಮ ಡಂಬಳ, ಮಮ್ಮಸಾಬ ಬಾಲೇಸಾಬನವರ, ಮಾಬಮ್ಮ ಕಳಕಾಪೂರ, ಮಮತಮ್ಮ ಬಾಲೇಸಾಬನವರ, ಖಾಶಿಂಬಿ ಜಾಲಿಹಾಳ, ದಾವಲಮ್ಮ ಗಡಾದ, ಮಮ್ಮಸಲೀಂ ಜಕ್ಕಲಿ, ಉಮೇಶ ಕೊಡಗಾನೂರ, ಇಸ್ಮಾಯಿಲ್ ಗಡಾದ, ಹನುಮಂತ ಕೊಡಗಾನೂರ, ಮೌಲುಸಾಬ ನದಾಫ್, ಆನಂದ ಬಾರಕೇರ, ಯಲ್ಲಪ್ಪ ಮುಕ್ಕಣ್ಣವರ, ಯಮನೂರ ಮಾದರ, ಯಲ್ಲಪ್ಪ ಬಾರಕೇರ, ರಾಜಾಸಾಬ್ ನಮಾಜಿ, ಬಾಬುಸಾಬ ಯಲಬುರ್ಗಿ ಮುಂತಾದವರಿದ್ದರು.

 

ಸತ್ಕಾರ್ಯಗಳಿಂದ ಸಮಾಜಕ್ಕೆ ಶಕ್ತಿ : ಶ್ರೀ ರಂಭಾಪುರಿ ಜಗದ್ಗುರುಗಳು

0
ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಸಮಾಜದಲ್ಲಿ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳು ಯಾವಾಗಲೂ ನಡೆಯಬೇಕು. ಸತ್ಕಾರ್ಯಗಳಿಂದ ಸಮಾಜಕ್ಕೆ ಹೆಚ್ಚು ಬಲ ದೊರಕಲು ಸಹಕಾರಿಯಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಕನಕಗಿರಿಯಲ್ಲಿ ನಿರ್ಮಾಣಗೊಂಡ ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಸಮುದಾಯ ಭವನದ ವಾಸ್ತು ಶಾಂತಿ ಪೂಜಾ ವಿಧಾನ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.
ಪರಮ ತಪಸ್ವಿ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ಸತ್ಯ ಸಂಕಲ್ಪ ಸಾಕಾರಗೊಂಡ ಸಂತೃಪ್ತಿ ಮನೋಭಾವ ನಮಗಿದೆ. ಮೂಲ ಸ್ಥಳ ದಾನಿಗಳಾದ ಹಂಪಣ್ಣ ಜೋಡಗಾಣದ, ಬಸೆಟ್ಟೆಪ್ಪ ಭತ್ತದ, ಮುದಕಪ್ಪ ಶೆಟ್ಟರ, ಗುಂಡದಮಠ ಕಂಪ್ಲಿ, ಲಕ್ಷ್ಮಣಪ್ಪ ಕನಕಪ್ಪ ಖ್ಯಾಡೆದ ದಾನ ಮಾಡಿದ ನಿವೇಶನದಲ್ಲಿ ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಸಮುದಾಯ ಭವನ ಭವ್ಯವಾಗಿ ನಿರ್ಮಾಣಗೊಂಡಿರುವುದು ದಾನಿಗಳವರ ಪರಿವಾರದವರಿಗೆ ಆತ್ಮ ಸಂತೃಪ್ತಿ ಉಂಟಾಗಿದೆ ಎಂದರು.
ಸೊರಬ ತಾಲೂಕಿನ ತೆಲಗುಂದ ಹಿರೇಮಠದ ವೇ.ಗುರುಶಾಸ್ತಿç ಮತ್ತು ಲಕ್ಷ್ಮೇಶ್ವರದ ಹಾಲೇವಾಡಿಮಠ ಶಿವಲಿಂಗಯ್ಯ ಶಾಸ್ತಿçಗಳವರ ವೈದಿಕತ್ವದಲ್ಲಿ ಪೂಜಾ ಕಾರ್ಯಗಳು ಜರುಗಿದವು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಸುವರ್ಣಗಿರಿ ಮಠದ ಡಾ.ಚನ್ನಮಲ್ಲ ಸ್ವಾಮಿಗಳು, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಕುಷ್ಟಗಿ ಮದ್ದಾನಿ ಮಠದ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಿಂಧನೂರು ಕನ್ನೂರಿನ ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಕೆಂಭಾವಿ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಹಾಗೂ ಹೆಬ್ಬಾಳದ ಶಿವಪ್ರಕಾಶ ಶರಣರು ಪಾಲ್ಗೊಂಡು ವೀರಶೈವ ಧರ್ಮ ಸಂಸ್ಕೃತಿ ಮತ್ತು ಗುರು ಪರಂಪರೆಯ ಮಹತ್ವವನ್ನು ವಿವರಿಸಿದರು.
ಚನಬಸಯ್ಯ ಹಿರೇಮಠ, ಸಂಗಪ್ಪ ಸಜ್ಜನ ಸಹೋದರರು, ಡಾ. ಗುರುಮೂರ್ತಿ, ಮಹಾಬಲೇಶ್ವರಪ್ಪ ಸಜ್ಜನ, ಗುರುಸಿದ್ಧಪ್ಪ ಹಾದಿಮನಿ, ಶೇಖರಗೌಡ ಪಾಟೀಲ, ಬಸವರಾಜ ಸಜ್ಜನ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಮೋಸ ಮಾಡಿದೆ : ತಾರಾ ಅನುರಾಧ

ವಿಜಯಸಾಕ್ಷಿ ಸುದ್ದಿ, ಹಾವೇರಿ : ಕಾಂಗ್ರೆಸ್‌ನವರು ಗ್ಯಾರಂಟಿ ಹೆಸರಲ್ಲಿ ಅತ್ತೆಗೆ ಕೊಟ್ಟು ಸೊಸೆಗೆ ಮೋಸ ಮಾಡಿದ್ದಾರೆ ಎಂದು ಚಿತ್ರನಟಿ ಹಾಗೂ ವಿ.ಪ ಮಾಜಿ ಸದಸ್ಯೆ ತಾರಾ ಅನುರಾಧ ಹೇಳಿದರು.

ಅವರು ಹಾವೇರಿ ಲೋಕಸಭಾ ಕ್ಷೇತ್ರದ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಡೀ ದೇಶವನ್ನು ತನ್ನ ಪರಿವಾರ ಎಂದು ಕರೆದ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರು. ಮೋದಿ ಅವರ ಹೆಸರಲ್ಲೆ ಮತ ಕೇಳುತ್ತಿದ್ದೀರಾ ಎನ್ನುತ್ತಾರೆ. ಇಡೀ ವಿಶ್ವವೇ ಅವರನ್ನು ಕರೆದು ಗೌರವಿಸುತ್ತಿದೆ. ಅಂತವರ ಹೆಸರಿನಲ್ಲಿ ಮತ ಕೇಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನವರು ಬಸ್‌ನಲ್ಲಿ ಮಹಿಳೆಯರಿಗೆ ಮಾತ್ರ ಫ್ರೀ ಎಂದು ಹೇಳಿ ಗಂಡಸರಿಗೆ ಡಬಲ್ ರೇಟ್ ಹಾಕಿದ್ದಾರೆ.

ಸಂಸಾರ ಅಂದ ಮೇಲೆ ಗಂಡ, ಹೆಂಡತಿ, ಮಕ್ಕಳು ಎಲ್ಲರೂ ಇರುತ್ತೇವೆ. ವಿದ್ಯುತ್ ಫ್ರೀ ಎಂದು ಹೇಳಿ ಎರಡು ಪಟ್ಟು ಬಿಲ್ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

ಅಪರಾಧ ತಡೆಗೆ ಇಲಾಖೆಯೊಂದಿಗೆ ಸಹಕರಿಸಿ:ಸುಮಾ ಎಮ್.ಗೊರಬಾಳ

0

ವಿಜಯಸಾಕ್ಷಿ ಸುದ್ದಿ, ಡಂಬಳ : ಗ್ರಾಮೀಣ ಪ್ರದೇಶಗಳಲ್ಲಿಯೂ ಬೈಕ್ ಕಳ್ಳತನ, ಮನೆ, ಅಂಗಡಿಗಳ ಕಳ್ಳತನ, ಸರಗಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಮೂಲಕ ಸಾರ್ವಜನಿಕರು ವಂಚನೆಗೆ ಒಳಗಾಗುತ್ತಿರುವುದು ಗಣನೀಯವಾಗಿ ಹೆಚ್ಚಳವಾಗುತ್ತಿವೆ. ಇವುಗಳನ್ನು ತಡೆಯಲು ಇಲಾಖೆ ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಿಗ್ನಲ್ ಜಂಪ್, ವಾಹನ ಚಾಲಕರಿಂದ ದುಡುಕಿನ ಚಾಲನೆ ಪ್ರಕರಣಗಳು ನಡೆಯುತ್ತಿವೆ. ಸಾರ್ವಜನಿಕರು ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಂಡು ಸುರಕ್ಷಿತವಾಗಿರಬೇಕೆಂದು ಮುಂಡರಗಿ ಪಿಎಸ್‌ಐ ಸುಮಾ ಎಮ್.ಗೊರಬಾಳ ಹೇಳಿದರು.

ಡಂಬಳ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ ನಗರದಲ್ಲಿ ಗುರುವಾರ `ಅಪರಾಧ ತಡೆ ಮಾಸಾಚರಣೆ’ಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಚಾಲಕರ ಪಕ್ಕದಲ್ಲಿ ಪ್ರಯಾಣಿಕರನ್ನು ಕೂರಿಸಿಕೊಳ್ಳುವುದು, ನಿರ್ಲಕ್ಷ್ಯದಿಂದ ಚಾಲನೆ ಮಾಡುವುದು, ಹೆಲ್ಮೆಟ್ ಧರಿಸದೇ ಇರುವುದು, ಸಿಗ್ನಲ್ ಬ್ರೇಕ್ ಮಾಡುವುದು ಸೇರಿದಂತೆ ಸಂಚಾರ ನಿಯಮಗಳನ್ನು ಪಾಲನೆಯಾಗುತ್ತಿಲ್ಲ. ಮನೆ ಕಳ್ಳತನ ತಡೆಗಟ್ಟುವ ಬಗ್ಗೆ ಪಾಲಿಸಬೇಕಾದ ಕ್ರಮಗಳು, ಮನೆ ಬಾಡಿಗೆ ನೀಡುವಾಗ ಪಾಲಿಸಬೇಕಾದ ಕ್ರಮಗಳು, ವಾಹನ ಕಳ್ಳತನ ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.

ಯಾವುದೇ ತುರ್ತು ಪರಿಸ್ಥಿತಿಗಳಲ್ಲಿ 112ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬೇಕು. ನಿತ್ಯ ನಡೆಯುವ ಅಪರಾಧಗಳ ನಿಯಂತ್ರಣಕ್ಕೆ ನಮ್ಮ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ತಮ್ಮ ಬಡಾವಣೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಜಾಗೃತೆ ವಹಿಸಬೇಕು. ಪಾಲಕರು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಜಾಗೃತೆ ವಹಿಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಎಸ್‌ಐ ವೀರಭದ್ರಪ್ಪ ತಂಟ್ರೆ, ಮುಖಂಡ ನಿಂಗಪ್ಪ ಮಾದರ, ಸೋಮಪ್ಪ ತಳಗೇರಿ, ಕೆಂಚಪ್ಪ ಹಳ್ಳಿಕೇರಿ, ಮರಿಯಪ್ಪ ದೊಡ್ಡಮನಿ, ಸುರೇಶ ದೊಡ್ಡಮನಿ, ಶ್ರೀಕಾಂತ ಪೂಜಾರ, ಕೆಂಚಪ್ಪ ಪೂಜಾರ, ಕೆಂಚಪ್ಪ ದೊಡ್ಡಮನಿ, ದುರಗಮ್ಮ ತಳಗೇರಿ, ಮರಿಯಪ್ಪ ದೊಡ್ಡಮನಿ, ದೇವಪ್ಪ ಬೆನ್ನಹಳ್ಳಿ, ಗೋವಿಂದಪ್ಪ ಘಟ್ಟರಡ್ಡಿಹಾಳ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಇದ್ದರು.

ಜ.ತೋಂಟದಾರ್ಯ ಮಠದ ಜಾತ್ರೆಯಲ್ಲಿ ಭಾವೈಕ್ಯತೆಯ ಭಾವಸಂಭ್ರಮ

ತೋಂಟದ ಸಿದ್ಧಲಿಂಗನ ಜಾತ್ರೆ ಅಂದರೆ, ಗ್ರಾಮ ಮತ್ತು ಪಟ್ಟಣಗಳ ಒಂದು ಪ್ರಮುಖ ಪರಂಪರೆ.
ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡಿಸುವಿಕೆಯೇ ಜ. ತೋಂಟದಾರ್ಯ ಮಠದ ಜಾತ್ರಾ ವಿಶೇಷತೆ ಎಂದು ಪರಿಗಣಿಸಲಾಗುತ್ತಿದೆ. ಪ್ರತಿ ವರ್ಷಕ್ಕೊಮ್ಮೆ ಸರ್ವತ್ರ ಸುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ ಉತ್ಸವಗಳೊಂದೊಡಗೂಡಿದ ಜ. ತೋಂಟದಾರ್ಯ ಮಠದ ರಥೋತ್ಸವವನ್ನು ಅತೀ ವಿಜೃಂಭಣೆಯಿಂದ ನಡೆಸಲಾಗುತ್ತಿದೆ.
ಇದು ನಮ್ಮ ದಕ್ಷಿಣ ಭಾಗದ ಕರ್ನಾಟಕದಲ್ಲಿ ನಡೆಯುವ ಅತಿ ದೊಡ್ಡ ಜಾತ್ರೆ. ಈ ಜಾತ್ರೆಗೆ ನಾಡಿನ ಮೂಲೆ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತದೆ. ಜಾತ್ರೆ ಅಂದಾಗ ಬರೀ ಉತ್ತತ್ತಿ-ಬಾಳೆಹಣ್ಣು ಎಸೆದು ಮೋಜು ಮಾಡುವಂತ ಜಾತ್ರೆಯಲ್ಲ. ಈ ಜಾತ್ರೆಯ ವಿಶೇಷತೆಯೇ ವಿಭಿನ್ನ. ಅನೇಕಾನೇಕ ಮನರಂಜನಾ ಕಾರ್ಯಕ್ರಮ, ಆರೋಗ್ಯ ಶಿಬಿರ, ಹೈನುಗಾರಿಕೆ, ಕೃಷಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಜೊತೆಗೆ ಜಾನಪದ ಕಲೆಗಳ ಪ್ರದರ್ಶನ ನಾಡಿನಲ್ಲಿ ಸಮಾಜಕ್ಕಾಗಿ, ದೇಶಕ್ಕಾಗಿ, ಸ್ವಾರ್ಥ ರಹಿತ ಸೇವೆಯನ್ನು ಸಲ್ಲಿಸಿದಂತ ನಾಡಿನ ಗಣ್ಯರ ಮಹಾತ್ಮರ ಕುರಿತು ಪುಸ್ತಕ ಬಿಡುಗಡೆ ಕಾರ್ಯಕ್ರಮ, ದಾಸೋಹ ಸೇವೆ ಜನಮನಕ್ಕೆ ಜ್ಞಾನವನ್ನು ಹಂಚುವಂತ ಜಾತ್ರೆಯಂದರೆ ಅದು ಜ. ತೋಂಟದಾರ್ಯ ಮಠದ ಜಾತ್ರೆ.
ಜಾತ್ರೆ ಎಂದರೆ ಜನ ಸೇರಿ ಉತ್ತತ್ತಿ ಬಾಳೆಹಣ್ಣು ಎಸೆದರೆ ಸಾಲದು. ಅದು ಜ್ಞಾನವನ್ನು ಹಂಚಿ ಮೌಢ್ಯತೆಯನ್ನು ತೊಲಗಿಸಿ, ವೈಚಾರಿಕತೆಯನ್ನು ಮೂಡಿಸುವುದೇ ಜಾತ್ರೆಯ ಉದ್ದೇಶವೆಂದು ಜಾತ್ರೆಗಳು ಜನಮಾನಸಕ್ಕೆ ಸಾರಿ ಹೇಳುವದೇ ನಿಜವಾದ ಜಾತ್ರೆ. ಜಾತ್ರೆ ಆಚರಿಸುವ ಉದ್ದೇಶ ಜಾತಿ-ಲಿಂಗ, ವರ್ಣಭೇದವಿಲ್ಲದೆ ಬಡವ, ಶ್ರೀಮಂತ ಎಂದು ಪರಿಗಣಿಸದೆ ಎಲ್ಲ ಧರ್ಮದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ನೋವು-ನಲಿವು ತಮ್ಮೆಲ್ಲಾ ಚಿಂತೆಗಳನ್ನು ಬದಿಗೊತ್ತಿ ಅಜ್ಜನ ಜಾತ್ರೆಯಲ್ಲಿ ಪಾಲ್ಗೊಂಡು ಪಾವನರಾಗುತ್ತಾರೆ.
math
ಜಗದ್ಗುರು ತೋಂಟದಾರ್ಯ ಸಿದ್ಧಲಿಂಗೇಶ್ವರ ಜಾತ್ರೆ ಸಡಗರ ಸಂಭ್ರಮದಿಂದ ಗರಿಗೆದರಿದೆ. ತ್ರಿವಿಧ ದಾಸೋಹಿ ಪೂಜ್ಯ ಶ್ರೀ ಜಗದ್ಗುರು ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯ ಪ್ರಕಾಶದಲ್ಲಿ ಶ್ರೀ ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಇವರ ಸನ್ನಿಧಿಯಲ್ಲಿ 2024ರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗುತ್ತವೆ.
ಏಪ್ರಿಲ್ 22ರಂದು ಪ್ರಾರಂಭೋತ್ಸವ, ಏ.23ರಂದು ಮಹಾರಥೋತ್ಸವ, ಏ.24ರಂದು ಲಘು ರಥೋತ್ಸವ,
ಏ.25ರಂದು ಮಂಗಲೋತ್ಸವ ಅಷ್ಟೇ ಅಲ್ಲದೆ, ಅಲ್ಲದೆ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಹೊರ ರಾಜ್ಯದಲ್ಲಿ ನೆಲೆಸಿರುವ ಬಸವ ಭಕ್ತರು ತೋಂಟದ ಸಿದ್ಧಲಿಂಗನ ಭಕ್ತರು ಇದ್ದಾರೆ. ಉದ್ಯೋಗ ಅರಸಿ ಹೊರ ಊರುಗಳಲ್ಲಿ ಇರುವವರು ಸಹ ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಬಂತು ಎಂದರೆ ಏನೋ ಸಡಗರ ಯಾವಾಗ ಜಾತ್ರೆಯಲ್ಲಿ ತೊಡಗಿ ಕರ್ತೃ ಗದ್ದುಗಿ ದರ್ಶನ ಮಾಡಿ ಪಾವನರಾಗುತ್ತೇವೋ ಎಂಬ ತವಕ.
jatra
ಮಾನವತೆಯ ಮಂಗಳದ ವಿಶ್ವ ಸಂಸ್ಕೃತಿಯ ಉಜ್ವಲ ಇತಿಹಾಸದಲ್ಲಿ 12ನೇ ಶತಮಾನದ ಶಿವಾಬ್ದಿ ಸ್ವರೋಣದಯವಾಗಿತ್ತು. ಮಾನವತೆ ಮಂಗಳದ ಮುಂಬೆಳಗಾಗಿ ಮೂಡಿ ಬಂದ ಬಸವಾದಿ ಪ್ರಮಥರನ್ನು ಕನ್ನಡದ ಬಂಗಾರದ ಭಾಂದಳದಲ್ಲಿ ವಚನ ಓಂಕಾರದ ಸುನಾದವನ್ನು ಮೊಳಗಿಸಿದವರು ಪೂಜ್ಯ ಲಿಂ. ಸಿದ್ಧಲಿಂಗ ಶ್ರೀಗಳು.
ಸದ್ಯದ ಪೂಜ್ಯ ಡಾ. ಸಿದ್ಧರಾಮ ಮಹಾಸ್ವಾಮಿಗಳು ಸಹ ಗುರುಗಳ ಮಾರ್ಗದಲ್ಲಿ ನಡೆದು ಶ್ರೀ ಮಠವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಈ ಕಾರಣಕ್ಕಾಗಿಯೇ ಸರಕಾರ ಕೂಡಾ ನಿತ್ಯ ಶಿವಾನುಭವ ಮೂಲಕ 12ನೇ ಶತಮಾನ ಬಸವಾದಿ ಶರಣ ಚಿಂತಕರ ಕುರಿತು ಉಪನ್ಯಾಸ ಏರ್ಪಡಿಸುವುದರ ಮೂಲಕ ಪೂಜ್ಯ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಜನ್ಮದಿನವನ್ನು `ಭಾವೈಕ್ಯತೆಯ ದಿನ’ವನ್ನಾಗಿ ಘೋಷಿಸಿ ಪೂಜ್ಯರ ಜಯಂತಿಯನ್ನು ಆಚರಿಸುವಂತಾಯಿತು.
ಕೋಮು ಸೌಹಾರ್ದತೆಗೆ, ವೈಚಾರಿಕತೆಗೆ ಹೆಸರಾದ ಶ್ರೀಮಠವು, ಇಂದಿನ ಆಧುನಿಕ ಯುಗದಲ್ಲಿ ಮಠಗಳು ಕೇವಲ ದೈವಭಕ್ತಿ ಕೇಂದ್ರಗಳಾಗಿದ್ದರೆ ಸಾಲದು, ಜಾತ್ರೆಗಳು ಮೂಢನಂಬಿಕೆಗಳ ಪ್ರತೀಕವಾಗಬಾರದು ಎನ್ನುವ ಸದುದ್ದೇಶದಿಂದ ರಥೋತ್ಸವವನ್ನು ಕಾರಣವಾಗಿಟ್ಟುಕೊಂಡು ಬಸವಾದಿ ಪ್ರಮಥರ, ಶರಣರ, ಸಂತರ ಮಹಾಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲಾಗುತ್ತಿದೆ. ಜಾತ್ರೆಗಳು ಸಾಂಸ್ಕೃತಿಕ ಸಂದೇಶಗಳನ್ನು ಸಾರುವ ಸಮ್ಮೇಳನವಾಗಬೇಕು. ಈ ದಿಶೆಯಲ್ಲಿ ಗದುಗಿನ ತೋಂಟದ ಸಿದ್ಧಲಿಂಗ ಯತಿಗೆ ರಥೋತ್ಸವವು ಜನ ಸಾಮಾನ್ಯರ ಜಾತ್ರೆಯಾಗಿ ಸಾಂಸ್ಕೃತಿಕ ಚಟುವಟಿಕೆಗಳ ಸಮ್ಮೇಳನವಾಗಿ ನಡೆಯುತ್ತಿರುವುದು ಈ ಭಾಗದ ಜನರಿಗೆ ಹೆಮ್ಮೆಯ ವಿಷಯ.
ಧರ್ಮಗುರು ಬಸವಣ್ಣನವರು ವಚನದಾಶಯದಂತೆ ಧೀರ ಜಂಗಮರಾಗಿ ಬದುಕಿದವರು ಮರಣವನ್ನು ಮಹಾನವಮಿ ಹಬ್ಬವಾಗಿ ಸ್ವೀಕರಿಸಿದರು. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ಯಶಸ್ವಿಯೂ ಆದರೂ ಹೀಗೆ ಜನಮಾನಸಕ್ಕೆ ಜ್ಞಾನ ಮೂಲಕ ಹೊಸ ನಾಂದಿಯನ್ನು ಹಾಡಿದವರು ಲಿಂ. ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲ ಜೀವನದಲ್ಲಿ ನಡೆದು ಕರಿಬಸಯ್ಯಜ್ಜನ ಕೃಪೆಗೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಗುರುಕೃಪೆಗೆ ಪಾತ್ರರಾಗೋಣ.
– ಚಿದಾನಂದಯ್ಯ ಶ್ರೀಶಾಂತಯ್ಯನಮಠ.
ಗದಗ.

ನಗರಸಭೆ ಉಪಾಧ್ಯಕ್ಷರ ಪುತ್ರ ಸೇರಿ ನಾಲ್ವರ ಹತ್ಯೆ ಪ್ರಕರಣ, ಶೀಘ್ರದಲ್ಲೇ ಹಂತಕರ ಬಂಧನ, ಎಸ್ಪಿ ಬಿ. ಎಸ್. ನೇಮಗೌಡ ನೇತೃತ್ವದಲ್ಲಿ ತಂಡ ರಚನೆ: ಐಜಿಪಿ ಮಾಹಿತಿ

0

ವಿಜಯಸಾಕ್ಷಿ ಸುದ್ದಿ, ಗದಗ

ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ ಸೇರಿದಂತೆ ನಾಲ್ವರ ಹತ್ಯೆ ಪ್ರಕರಣದಲ್ಲಿ ಬಾಗಿಯಾದ ಹಂತಕರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಉತ್ತರ ವಲಯ ಐಜಿಪಿ ವಿಕಾಸಕುಮಾರ್ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಐಜಿಪಿ, ಮಾಧ್ಯಮದವರ ಜೊತೆಗೆ ಮಾತನಾಡಿ ಈ ವಿಷಯ ತಿಳಿಸಿದರು.

https://youtu.be/MbuBYXYBD_A

ಕೊಲೆ ಪ್ರಕರಣ ತುಂಬಾ ಗಂಭೀರವಾಗಿದ್ದು, ತನಿಖೆ ಆರಂಭಿಸಿಲಾಗಿದೆ. ಕೊಲೆ ಮಾಡಿದವರು ದರೋಡೆಕೋರರು ಅಲ್ಲ, ಆಗಿದ್ದರೆ ಚಿನ್ನಾಭರಣ ಲೂಟಿ ಮಾಡುತ್ತಿದ್ದರು. ಮೃತ ದೇಹಗಳ ಮೇಲೆ ಆಭರಣಗಳು ಹಾಗೆಯೇ ಇವೆ. ಕೊಲೆಗಾರರ ಪತ್ತೆಗೆ ಎಸ್ಪಿ ಬಿ.ಎಸ್
‌ನೇಮಗೌಡ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಲಾಗಿದೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆದಿದೆ. ಸಾರ್ವಜನಿಕರ ಬಳಿ ಏನಾದರೂ ಮಾಹಿತಿ ಇದ್ದರೆ ಪೊಲೀಸರಿಗೆ ನೀಡಲು ವಿನಂತಿಸಿದರು.

ಇಂದು ನಸುಕಿನ 2 ಗಂಟೆಗಳ ಸುಮಾರಿಗೆ ಈ ಘಟನೆ ನಡೆದಿರಬಹುದು ಎಂದು ಐಜಿಪಿ ವಿಕಾಸ್‌ಕುಮಾರ್ ಮಾಹಿತಿ ನೀಡಿದರು. ಶಹರ ಪೊಲೀಸ್ ಠಾಣೆಯಲ್ಲಿ 396 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದರು.

‘ಪುಲಿಗೆರೆ ಉತ್ಸವ’ದ ಮೊದಲ ದಿನದ ಕಾರ್ಯಕ್ರಮಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ, ಇನ್ಫೋಸಿಸ್ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಾಗೂ ಭಾರತೀಯ ವಿಧ್ಯಾಭವನ ಬೆಂಗಳೂರು ಇವರ ಸಹಕಾರದಲ್ಲಿ ಏಪ್ರಿಲ್ 19, 20 ಮತ್ತು 21ರಂದು ಪುಲಿಗೆರೆ ಉತ್ಸವ ನಡೆಯಲಿದೆ.

utsava

ದಿ.19ರಂದು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಉದಯ ರಾಗ-1ರಲ್ಲಿ ಖ್ಯಾತ ಕಲಾವಿದ ಸರ್ಪರಾಜ್ ಖಾನ್ ಇವರಿಂದ ಸಾರಂಗಿ ವಾದನದೊಂದಿಗೆ ಕಾರ್ಯಕ್ರಮ ಆರಂಭವಾಗುವುದು. 7 ಗಂಟೆಗೆ ಖ್ಯಾತ ಹಿಂದುಸ್ಥಾನಿ ಸಂಗೀತ ಕಲಾವಿದೆ ಕುಮಟಾದ ರೇಷ್ಮಾಭಟ್ ಅವರಿಂದ ಹಿಂದೂಸ್ಥಾನಿ ಗಾಯನ ಜರುಗುವುದು.

ಸಂಜೆ 4 ಗಂಟೆಗೆ ವಿವಿಧ ವಾದ್ಯ ವೈಭವ, ಭಕ್ತರ ಸಮ್ಮಿಲನದೊಂದಿಗೆ ಅಲಂಕೃತ ಶ್ರೀ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ಸಿದ್ದಾಪುರದ ಕೊಳಗಿ ಕೇಶವ ಹೆಗಡೆ ಮತ್ತು ತಂಡದವರಿಂದ ಯಕ್ಷಗಾನ ಜರುಗಲಿದೆ. ಸಂಜೆ 7 ಗಂಟೆಗೆ ಹಿರಿಯ ಸಂಗೀತ ಕಲಾವಿದ ಗಾಯಕ ಡಾ.ಅಶೋಕ ಹುಗ್ಗಣ್ಣವರ ಅವರಿಂದ ಹಿಂದೂಸ್ಥಾನಿ ಗಾಯನ ನಡೆಯಲಿದೆ. ಬಳಿಕ 8.30ಕ್ಕೆ ಬೆಂಗಳೂರಿನ ವಿ.ಕಾವ್ಯಾ ಕಾಶಿನಾಥನ್ ಮತ್ತು ಶಶಾಂಕ್ ಕಿರೋಣ ನಾಯರ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದು ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ತಿಳಿಸಿದ್ದಾರೆ.

ಅಕ್ಕನ ವಚನಗಳಿಂದ ಜೀವನೋನ್ನತಿ : ತೋಂಟದ ಮಹಾಸ್ವಾಮಿಗಳು

0
ವಿಜಯಸಾಕ್ಷಿ ಸುದ್ದಿ, ಗದಗ : ಮನುಷ್ಯನ ದುಃಖಕ್ಕೆ ಮನಸ್ಸೇ ಕಾರಣ. ಎಲ್ಲಾ ಇಂದ್ರಿಯಗಳಿಗೂ ಚೇತನ ನೀಡುವುದರ ಮೂಲಕ ಮನಸ್ಸೇ ಇಂದ್ರಿಯಗಳಿಗೆ ಮೂಲವಾಗಿದೆ. ನಮ್ಮಲ್ಲಿರುವ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಬೇಕು. ಭಗವಂತನ ಚಿಂತನೆಯನ್ನು ಮಾಡುತ್ತ, ಶರಣಾಗತಿ ಭಾವವನ್ನು ಹೊಂದಿದಾಗ ಮಾತ್ರ ಮೋಕ್ಷವನ್ನು ಸಂಪಾದಿಸಬಹುದು. ಅಕ್ಕನ ವಚನಗಳನ್ನು ಮತ್ತೆ ಮತ್ತೆ ಓದುವುದರ ಜೊತೆಯಲ್ಲಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಉನ್ನತಿ ಪಡೆಯಬಹುದೆಂದು ಶ್ರೀ ಮ.ನಿ.ಪ್ರ. ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಅಕ್ಕನ ಬಳಗದಲ್ಲಿ ಅಕ್ಕನ ಜಯಂತಿ ಉತ್ಸವದ ನಿಮಿತ್ತ ನಡೆಯುತ್ತಿರುವ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಷಟ್‌ಸ್ಥಲ್ ಧ್ವಜಾರೋಹಣ ನೆರವೇರಿಸಿ ಶ್ರೀಗಳು ಆಶೀರ್ವಚನದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶೀವಲೀಲಾ ಹಿರೇಮಠ ಪ್ರಾರ್ಥಿಸಿದರು. ಅಕ್ಕನ ಬಳಗದ ಅಧ್ಯಕ್ಷೆ ಲಲಿತಾ ವಿ.ಬಾಳಿಹಳ್ಳಿಮಠ ಸ್ವಾಗತಸಿದರು.
ಕಾರ್ಯದರ್ಶಿ ರೇಣುಕಾ ಎಲ್.ಅಮಾತ್ಯ ವಂದಿಸಿದರು. ಜಯಲಕ್ಷ್ಮಿ ವಿ.ಬಳ್ಳಾರಿ ಕಾರ್ಯಕ್ರಮ ಸಂಯೋಜಿಸಿದರು. ಪ್ರೇಮಾ ಬಿ.ಮೇಟಿ ನಿರೂಪಿಸಿದರು. ಖ್ಯಾತ ಹಿಂದೂಸ್ತಾನಿ ಗಾಯಕಿ ಪಾರ್ವತಿ ವಿ.ಮಾಳೆಕೊಪ್ಪಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅನ್ನಪೂರ್ಣ ಮಾಳೆಕೊಪ್ಪಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪವಿತ್ರಾ ಬಿರಾದಾರ ಪ್ರಸಾದದ ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದರು.
ಶಿವಲೀಲಾ ಕುರುಡಗಿ, ಕಸ್ತೂರಿ ಹಿರೇಗೌಡರ, ಸುಜಾತಾ ಮಾನ್ವಿ, ಶಾರದಾ ಹಿರೇಮಠ, ರೇಖಾ ಶಿಗ್ಲಿಮಠ, ದೀಪಾ ಪಟ್ಟಣಶೆಟ್ಟಿ, ಶ್ರೇಯಾ ಪವಾಡಶೆಟ್ಟರ್, ಸರೋಜಕ್ಕ ಮಾನ್ವಿ, ಜಯಶ್ರೀ ಬಾಳಿಹಳ್ಳಿಮಠ, ವಿದ್ಯಾ ಧಡಿ, ಸುಜಾತಾ ಹಿರೇಮಠ, ಶಶಿಕಲಾ ಹಿರೇಮಠ, ಸುವರ್ಣ ಮದರಿಮಠ ಮುಂತಾದವರು ಪಾಲ್ಗೊಂಡಿದ್ದರು.
12ನೇ ಶತಮಾನದಲ್ಲಿ ದೊರೆತ ಸ್ವಾತಂತ್ರ್ಯವನ್ನು ಅನುಭವಿಸಿದ ಮಹಿಳಾ ಶ್ರೇಷ್ಠ ಶಿವಶರಣೆ ಅಕ್ಕಮಹಾದೇವಿ, ಮಹಿಳಾ ಸಾಧಕರಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದ ಮಹಿಳೆ ತನ್ನ ಬದುಕನ್ನು ಮಾತ್ರ ಸಾರ್ಥಕಪಡಿಸಿಕೊಳ್ಳದೇ ಆತ್ಮಕಲ್ಯಾಣದ ಜೊತೆಗೆ ಸಮಾಜದ ಕಲ್ಯಾಣ ಸಾಧಿಸಿರುವ ಮಹಾಜ್ಞಾನಿ, ಚಿಕ್ಕವಯಸ್ಸಿನಲ್ಲಿಯೇ ಹೆಚ್ಚಿನ ಜ್ಞಾನವನ್ನು ಪಡೆದ ಮಹಿಳೆ, ಅದ್ಭುತವಾದ ಕವಿತಾ ಶಕ್ತಿ ಇರುವ, ಭಾರತ ಭೂಮಿಯ ಮೊಟ್ಟ ಮೊದಲ ಮಹಿಳಾ ಕವಿಯತ್ರಿಯೂ ಹೌದು. ಅಕ್ಕನ ವಚನಗಳಲ್ಲಿ ಮೌಲ್ಯ ತುಂಬಿರುತ್ತಿತ್ತು ಎಂದು ಶ್ರೀಗಳು ತಿಳಿಸಿದರು.
error: Content is protected !!