Home Blog Page 3293

ಘಟಪ್ರಭಾ ಕಾಲುವೆಗೆ ಕಾರು ಪಲ್ಟಿಯಾಗಿ ನಾಲ್ವರ ದುರ್ಮರಣ

ವಿಜಯಸಾಕ್ಷಿ ಸುದ್ದಿ, ಲೋಕಾಪುರ;

ಕಲ್ಲಿಗೆ ಡಿಕ್ಕಿಯಾಗಿ ಕಾರು ಪಲ್ಟಿ ಹೊಡೆದು ಘಟಪ್ರಭಾ ಕಾಲುವೆಗೆ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ನಿನ್ನೆ ತಡರಾತ್ರಿ ಸಂಭವಿಸಿದೆ.

ಮೃತರು ರಾಮದುರ್ಗ ತಾಲೂಕಿನ ಗುಡಮ್ಮನಾಳ, ಮುದೇನಕೊಪ್ಪ, ಬಿಡಕಿ ಹಾಗೂ ಸುನ್ನಾಳ ಗ್ರಾಮದವರು. ಕಾರು ಚಾಲಕ ಸುನೀಲ ಸದಪ್ಪ ಅರಬೆಂಚಿ (24), ಮಹಾದೇವಗೌಡ ಶಂಕರ್ ಗೌಡ ಪಾಟೀಲ (27), ವಿಜಯ ಶಿವಾನಂದ ಲಟ್ಟಿ (26), ಎರಿತಾತಾ ಮೌನೇಶ್ವರ ಕಂಬಾರ (26) ಮೃತರು. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಆರು ಜನರು ಮುಧೋಳದಿಂದ ಸಾಲಹಳ್ಳಿ ಕಡೆಗೆ ಹೊರಟಿದ್ದಾಗ ಹಲಕಿ ಗ್ರಾಮದ ಬಳಿ‌ ಕಲ್ಲಿಗೆ ಡಿಕ್ಕಿ ಹೊಡೆದ ಕಾರು ರಸ್ತೆ ಬದಿಯ ಘಟಪ್ರಭಾ ಕಾಲುವೆಗೆ ಉರುಳಿಬಿದ್ದು ಈ ದುರ್ಘಟನೆ ಸಂಭವಿಸಿದೆ.

ಮೃತದೇಹ ಹಾಗೂ ಕಾರನ್ನು ಕ್ರೇನ್ ಮೂಲಕ‌ ಮೇಲಕ್ಕೆತ್ತಲಾಗಿದೆ. ಸ್ಥಳಕ್ಕೆ ಲೋಕಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆ, ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಮಗ

0

ವಿಜಯಸಾಕ್ಷಿ ಸುದ್ದಿ, ಮೈಸೂರು:

ತಂದೆ ಹಾಗೂ ಆತನ ಜೊತೆಗಿದ್ದ ಮಹಿಳೆಯನ್ನು ಯುವಕ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೈಸೂರು ನಗರದ ಶ್ರೀನಗರದಲ್ಲಿಂದು ಸಂಭವಿಸಿದೆ.

ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಕೊಲೆ ಮಾಡಿದ ಕೊಪ್ಪಲು ನಿವಾಸಿ ಸಾಗರ್ ತಲೆಮರೆಸಿಕೊಂಡಿದ್ದಾನೆ.

ಮೈಸೂರಿನ ಶ್ರೀನಗರದ ನಿವಾಸಿ ಲತಾ ಮನೆಗೆ ನುಗ್ಗಿ ಮೊದಲು ತಂದೆಯನ್ನು ನಂತರ ಲತಾಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಲತಾ ಮೇಲೆ ಹಲ್ಲೆಗೆ ಮುಂದಾದಾಗ ತಡೆಯಲು ಬಂದ ಲತಾ ಪುತ್ರ ನಾಗಾರ್ಜುನನಿಗೂ ಮಚ್ಚಿನಿಂದ ಹಲ್ಲೆ ಮಾಡಿದ್ದು, ಗಾಯಗೊಂಡಿರುವ ಈತನನ್ನು ಆಸ್ಪತ್ರೆಗೆ ದಾಖಲಾಗಿದೆ. ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಸಿಯೂಟ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ

ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ;

ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಮಕ್ಕಳಿಗೆ ಊಟ ಬಡಿಸುವ ಮೂಲಕ ಬಿಸಿಯೂಟ ಪ್ರಾರಂಭೋತ್ಸವಕ್ಕೆ
ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಒಂದೂವರೆ ವರ್ಷದಿಂದ ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಬಿಸಿಯೂಟ ಕಾರ್ಯಕ್ರಮ ಇಂದು ಪ್ರಾರಂಭ ಆಗಿರುವುದು ಖುಷಿಯ ವಿಚಾರ. ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯ ಹಾಗೂ ಶಿಕ್ಷಕರು ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಡುಗೆ ಮಾಡುವವರು ಜಾಗ್ರತೆ ವಹಿಸಿ ಮಕ್ಕಳ ಆರೋಗ್ಯ ಕಾಪಾಡಬೇಕೆಂದರು.

ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಎಚ್.ಡಿ. ರಾಯರಡ್ಡಿ, ಗ್ರಾಪಂ ಸದಸ್ಯರಾದ ಬಾಪುಗೌಡ ಹಿರೇಗೌಡ್ರ, ಪ್ರಧಾನ ಗುರು ವಿ.ಜಿ. ಬೋಗಾರ, ಸಹ ಶಿಕ್ಷಕರಾದ ಎ.ಜಿ. ಅರಗಂಜಿ, ಬಿ. ಎಸ್. ಮಾಳಣ್ಣವರ, ಜಿ.ಎಸ್. ಮೂಗನೂರ, ಎಸ್.ಐ. ತಳವಾರ, ಎಂ.ಎ ದಳವಾಯಿ, ಹಿರಿಯರಾದ ಬಸನಗೌಡ ಮುದಿಗೌಡ್ರ, ಅಡಿವೆಪ್ಪ ಮರಿಯಣ್ಣವರ, ಅಡುಗೆ ಸಹಾಯಕಿಯರು ಉಪಸ್ಥಿತರಿದ್ದರು.

ವಾಲ್ಮೀಕಿ ಸ್ತ್ರೀ ಶಕ್ತಿ ಸಂಘದಿಂದ ಗ್ರಾಪಂ ಅಧ್ಯಕ್ಷ, ಸದಸ್ಯರಿಗೆ ಸನ್ಮಾನ

ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ:

ಗ್ರಾಮದಲ್ಲಿ ವಾಲ್ಮೀಕಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ ಹಾಗೂ ವಾಲ್ಮೀಕಿ ಯುವಕ ಮಂಡಳ ಆಯೋಜಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವಕ್ಕೆ
ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಬೇಟೆ ಆಡಿ ಜೀವನ ನಡೆಸುತ್ತಿದ್ದ ರತ್ನಾಕರ ಎಂಬ ವ್ಯಕ್ತಿ ನಾರದ ಮುನಿಗಳ ಮಾತು ಕೇಳಿ ತನ್ನ ತಪ್ಪು ತಿದ್ದಿಕೊಂಡು ಕೊನೆಗೆ ಮಹರ್ಷಿ ವಾಲ್ಮೀಕಿಯಾಗಿ ಬದಲಾಗಿ ಪವಿತ್ರ ಮಹಾಕಾವ್ಯ ರಾಮಾಯಣ ಬರೆದು ವಾಲ್ಮೀಕಿ ಮನ್ನಣೆ ಪಡೆಯುತ್ತಾರೆ. ನಾವು ಹುಟ್ಟುತ್ತಲೆ ಒಳ್ಳೆಯವರು ಅಥವಾ ಕೆಟ್ಟವರಾಗಿ ಹುಟ್ಟಿರುವುದಿಲ್ಲ ಎಂಬುದನ್ನು ವಾಲ್ಮೀಕಿಯ ಜೀವನ ನಮಗೆ ಕಲಿಸುತ್ತದೆ. ನಾವು ಮಾಡುವ ಕಾರ್ಯ ನಮ್ಮ ಶ್ರೇಷ್ಠತೆ ನಿರ್ಧರಿಸುವುದು ಎಂದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ ಹಾಗೂ ವಾಲ್ಮೀಕಿ ಯುವಕ ಮಂಡಳದ ವತಿಯಿಂದ ಗ್ರಾಪಂ, ಅಧ್ಯಕ್ಷರು, ಸದಸ್ಯರನ್ನು ಸನ್ಮಾನಿಸಲಾಯಿತು.

ಮಾಜಿ ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಪ್ರೊ. ಬಿ.ಸಿ. ಹನಮಂತಗೌಡ್ರ ಮಾತನಾಡಿದರು. ವೇದಿಕೆ ಮೇಲೆ ಗ್ರಾಪಂ ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪು ಹಿರೇಗೌಡ್ರ, ಶರಣಬಸಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶೋಭಾ ಕೋಣನ್ನವರ, ಶೃತಿ ಬ್ಯಾಳಿ, ಶಂಕ್ರಮ್ಮ ಚಲವಾದಿ ಉಪಸ್ಥಿತರಿದ್ದರು.

ವಾಲ್ಮೀಕಿ ಸಮಾಜದ ಮುಖಂಡರು, ಯುವಕರು, ತಾಯಂದಿರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ನಾಯಕರು‌ ಹತಾಶರಾಗಿದ್ದಾರೆ: ವಿಜಯೇಂದ್ರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ದೇಶಾದ್ಯಂತ ಸೋತು ತಣ್ಣಗಾಗಿರುವ ಕಾಂಗ್ರೆಸ್ ನಾಯಕರು ಹತಾಶೆಯ ಹೇಳಿಕೆ ನೀಡುತ್ತಿದ್ದಾರೆ ಎಂದು
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.

ಸಿಂಧಗಿ ಉಪ ಚುನಾವಣೆಗೆ ಹೋಗುವಾಗ ಮಾರ್ಗ‌ ಮಧ್ಯೆ ಬುಧವಾರ ಕೊಪ್ಪಳದ ಶ್ರೀಗವಿಮಠಕ್ಕೆ ಭೇಟಿ ನೀಡಿ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದ ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.

ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇದೆ. ಬಿಜೆಪಿ ಮಾಡಿದ ಕೆಲಸದಿಂದ ಬಿಜೆಪಿ ವೋಟ್ ಕೇಳುತ್ತದೆ
ಕಾಂಗ್ರೆಸ್ ನಾಯಕರು ಹತಾಶರಾಗಿ ಪ್ರಧಾನಿ ‌ಮೋದಿ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾರೆ ಎಂದರು.

ಉಪ ಚುನಾವಣೆಯಲ್ಲಿ ಆರ್ ಎಸ್ ಎಸ್ ಬಗ್ಗೆ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಪಸಂಖ್ಯಾತರನ್ನು ಒಲೈಕೆ ಮಾಡಲು ಕಾಂಗ್ರೆಸ್‌ನವರು ಬಿಜೆಪಿ ಹಾಗೂ ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆರ್ ಎಸ್ ಎಸ್‌ಗೆ ಹಣ ಎಲ್ಲಿಂದ ಬರುತ್ತೆ ಎಂಬ ಎಚ್ ಡಿಕೆ ಹೇಳಿಕೆಗೆ ಇಂಥ ಕೆಲಸಕ್ಕೆ ಬಾರದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು‌.

ಯಡಿಯೂರಪ್ಪ ಸೈಡ್‌ಲೈನ್ ಆಗಲ್ಲ: ರಾಮುಲು

ವಿಜಯಸಾಕ್ಷಿ ಸುದ್ದಿ, ಗಂಗಾವತಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯಲ್ಲಿ ಯಾವತ್ತೂ ಸೈಡ್‌ಲೈನ್ ಆಗಲ್ಲ. ಅವರು ದೊಡ್ಡ ಶಕ್ತಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಗಂಗಾವತಿ ತಾಲೂಕಿನ ಪಂಪಾಸರೋವರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ರಾಮುಲು ‌ಬಿಜೆಪಿಯಲ್ಲಿ ಯಾವತ್ತೂ ಸೈಡ್‌ಲೈನ್ ಆಗಲ್ಲ. ನಾವು ಜನರ ಮಧ್ಯೆ ಹೋರಾಟದ ಹಾದಿಯಲ್ಲಿ ಬಂದವರು. ಸೈಡ್‌ಲೈನ್ ಆಗುವ ಪ್ರಮೇಯವೇ ಇಲ್ಲ ಎಂದರು.

ಸಿಂಧಗಿ ಹಾನಗಲ್‌ನಲ್ಲಿ ನಾವು ಈಗಾಗಲೇ ಗೆದ್ದಿದ್ದೇವೆ. ಎಷ್ಟು ಅಂತರದಲ್ಲಿ ಗೆಲ್ತೀವಿ ಅನ್ನೋದು ಮಾತ್ರ ಮುಖ್ಯ.
ಇಂದು ನಾನು ಸಿಂಧಗಿಗೆ ಹೋಗುತ್ತಿದ್ದೇನೆ‌‌. ಬೊಮ್ಮಾಯಿ, ಯಡಿಯೂರಪ್ಪ ಇಬ್ಬರು ಪ್ರಚಾರ ಮಾಡುತ್ತಿದ್ದಾರೆ ಎಂದರು

ST ಮೀಸಲಾತಿ ವಿಚಾರದಿಂದ ನಾವು ಹಿಂದೆ ಬರಲ್ಲ. ಕಾನೂನು ತೊಡಕು ಬಗೆಹರಿದ ತಕ್ಷಣ ಕ್ಲೀಯರ್ ಆಗುತ್ತೆ ಎಂದು ತಿಳಿಸಿದರು.

ನಾಲಿಗೆ ಇಲ್ಲದವರಂತೆ ಮಾತನಾಡುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ
ಆರ್‌ಎಸ್‌ಎಸ್ ಬಗ್ಗೆ ನಾಲಗೆ ಇಲ್ಲದವರಂತೆ ಮಾತನಾಡುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಿಡಿ ಕಾರಿದರು.

ದೇಶಕ್ಕೆ ತೊಂದರೆ ಆದಾಗ ಆರ್‌ಎಸ್‌ಎಸ್ ಸಂಘಟನೆ ಏನು ಅಂತಾ ತೋರಿಸುತ್ತದೆ. ಸೈನಿಕರ ತರಹ ಆರ್‌ಎಸ್ಎಸ್ ಕೆಲಸ ಮಾಡ್ತಿದೆ. ಕುಮಾರಸ್ವಾಮಿ ನಾಲಿಗೆ ಇಲ್ಲದಂತೆ ಮಾತಾನಾಡುತ್ತಿದ್ದಾರೆ.
ಅವರಿಗೆ ನಾನು ಉತ್ತರ ಕೊಡಲ್ಲ ಎಂದು ರಾಮುಲು ಲೇವಡಿ ಮಾಡಿದರು.

ಭಯೋತ್ಪಾದಕರಿಂದ ದೇಶಕ್ಕೆ ಕುತ್ತು ಬಂದಾಗ ಆರ್‌ಎಸ್ಎಸ್ ಕೆಲಸ ಹೇಗಿರುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆರ್‌ಎಸ್ಎಸ್ ಅನ್ನೋದು ಸದಾ ಸ್ವಯಂ ಸೇವೆಗೆ ಸಿದ್ಧ ಎನ್ನುವ ಸಂಘಟನೆ ಎಂದು ಅವರು ಪ್ರತಿಪಾದಿಸಿದರು.

ರಾಜಕಾರಣಕ್ಕಾಗಿ ಅವರೆಲ್ಲ ಟೀಕೆ ಮಾಡ್ತಿದಾರೆ. ಸಂಘಟನೆ ಬಗ್ಗೆ ಟೀಕೆ ಮಾಡೋದು ಶೋಭೆ ತರೋ ಕೆಲಸ ಇಲ್ಲ..
ಕೆಲವರ ವೈಯಕ್ತಿಕ ವಿಚಾರಗಳ ಕುರಿತು ಮಾತನಾಡಲ್ಲ‌. ನಮ್ಮ ಪ್ರಧಾನ ಮಂತ್ರಿ ಬಗ್ಗೆನೂ ಅವರು ಮಾತಾಡೋದು ತಪ್ಪು ಎಂದು ರಾಮುಲು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರನ್ನು ಕುಟುಕಿದರು.

ಹೆಲ್ಪ್‌ಲೆಸ್ ಸರ್ವೀಸ್..!
ಆರ್‌ಎಸ್ಎಸ್ ಸಂಘಟನೆ ready for self service ಎಂದು ಹೇಳುವಾಗ ತಡಬಡಾಯಿಸಿದ ರಾಮುಲು ಮಾತಿನ ಭರದಲ್ಲಿ ಆರ್‌ಎಸ್ಎಸ್ ಸಂಘಟನೆಯದ್ದು helpless ಸರ್ವೀಸ್ ಎಂದು ಪೇಚಿಗೆ ಸಿಲುಕಿದರು.

ಕಟೀಲರಿಗೆ ಮಾನಸಿಕ ಸಮಸ್ಯೆ ಇದ್ದರೆ ನಾವೇ ಟ್ರೀಟ್ಮೆಂಟ್ ಕೊಡಿಸ್ತೇವೆ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಬಿಜೆಪಿ ಅಧ್ಯಕ್ಷರಾಗಿದ್ದರೂ ಪಕ್ಷ, ಮಾಧ್ಯಮದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮಾಧ್ಯಮಗಳಲ್ಲಿ ಅವರ ಹೇಳಿಕೆ ಪ್ರಸಾರ ಆಗುತ್ತಿಲ್ಲ. ಕಟೀಲ್ ಗಿಂತಲೂ ಯತ್ನಾಳ ಸುದ್ದಿಗಳು ಹೆಚ್ಚು ಪ್ರಚಾರವಾಗುತ್ತಿವೆ.ಯಡಿಯೂರಪ್ಪ, ಬೊಮ್ಮಾಯಿ ಸೈಡ್ಲೈನ್ ಮಾಡಿದ್ದಾರೆ. ಇದರಿಂದ
ನಳೀನ್ ಕುಮಾರ್ ಕಟೀಲ್ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಹತಾಶರಾದಾಗ ದಾರಿ ತಪ್ಪುವುದು ಸಹಜ. ದಾರಿ ತಪ್ಪಿದಾಗ ಕೆಲವು ಜನ ಮದ್ಯಪಾನ, ಡ್ರಗ್ಸ್ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ಇಂತಹ ರೀತಿ ಮಾತನಾಡುತ್ತಾರೆ. ಇವರು ನೋಡಿದರೆ ನನಗೆ ಅನುಮಾನ ಬರುತ್ತಿದೆ ಎಂದರು.

ಪುಕ್ಸಟ್ಟೆ ಪ್ರಚಾರಕ್ಕೊಸ್ಕರ ವೈಯಕ್ತಿಕವಾಗಿ ಮಾತಾಡಬೇಡಿ. ಮಾನಸಿಕ ಅಸ್ವಸ್ಥರಾಗಿದ್ದಾರೆ ನಮ್ಮಲ್ಲೇ ಡಾಕ್ಟರ್ ಗಳಿದ್ದಾರೆ. ಟ್ರಿಟ್ಮೆಂಟ್ ಕೊಡಿಸುತ್ತೇವೆ.‌ ಮಾನಸಿಕವಾಗಿ ಅಸ್ವಸ್ಥತೆಯ ಸಮಸ್ಯೆ ಇದ್ದರೆ ಮುಚ್ಚಿಡಬೇಡಿ ಇದರಿಂದ ಏನೂ ಸಮಸ್ಯೆ ಇಲ್ಲ. ನಾವು ಸಹಕಾರ ಕೊಟ್ಟು ನಿಮಗೆ ಟ್ರಿಂಟ್ ಮೆಂಟ್ ಕೊಡುತ್ತೇವೆ ಎಂದು ವ್ಯಂಗ್ಯವಾಡಿದರು.

ನಮ್ಮ ಲೀಡರ್ ಬಗ್ಗೆ ಮಾತಾಡಿದರೆ ನಾವು ನಿಮ್ಮ ಲೀಡರ್ ಬಗ್ಗೆ ಮಾತಾಡಬೇಕಾಗುತ್ತೆ. ನೀವು ನಮ್ಮ ಲೀಡರ್ ಬಗ್ಗೆ ಸಾರ್ವಜನಿಕವಾಗಿ ಹೇಳೋಕೆ ರೇಡಿಯಿದ್ದರೆ, ನಿಮ್ಮ ಲೀಡರ್ ಗಳ ಬಗ್ಗೆ ನಾವು ಸಾರ್ವಜನಿಕವಾಗಿ ಹೇಳೋದನ್ನು ಕೆಳೋಕೆ ರೆಡಿ ಇರಬೇಕು ಎಂದರು.

ಮೋದಿ ಹೆಬ್ಬೆಟ್ಟು ಗಿರಾಕಿ ಎಂಬ ಹೇಳಿಕೆ ಸಮರ್ಥನೆ ಮಾಡಿಕೊಂಡ ಪ್ರಿಯಾಂಕ, ಹೆಬ್ಬೆಟ್ಟು ಅಸಂವಿಧಾನಿಕ ಪದವಂತೂ ಅಲ್ಲ. ಮೋದಿ ಏನ್ ಓದಿದ್ದಾರೆ ಅನ್ನೋದು ಆರ್ ಟಿ ಐ ನಲ್ಲೇ ಕೊಟ್ಟಿಲ್ಲ. ಅವರ ಕ್ಲಾಸ್ ಮೇಟ್ ಯಾರು ಅನ್ನೋದು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ‌ ಮೇಲೆ ಡ್ರಗ್ಸ್ ಸೇವನೆ ಹೆಚ್ಚಾಗುತ್ತಿದೆ. ದೇಶ್ಯಾದ್ಯಂತ ಡ್ರಗ್ಸ್ ಸೇವನೆ ಕೇಸಲ್ಲಿ ಬಿಜೆಪಿ ನಾಯಕರೇ ಬಂಧಿತರಾಗಿದ್ದಾರೆ. ಕಟೀಲ್ ನಿಮಗೆ ನಿಜವಾಗಿಯೂ ಶಕ್ತಿ ಇದ್ದರೆ ರಾಹುಲ್ ಗಾಂಧಿಯರನ್ನು ಪ್ರಶ್ನೆ ಮಾಡಬೇಡಿ. ಅಮಿತ್ ಷಾ ಅವರಿಗೆ ಕೇಳಿ, ಬೊಮ್ಮಾಯಿ ಸರ್ಕಾರಕ್ಕೆ ಕೇಳಿ ಎಂದರು.

ಕಳೆದ ತಿಂಗಳು ಗುಜರಾತ್ ನಲ್ಲಿ ಅದಾನಿಗೆ ಸೇರಿದ ಖಾಸಗಿ ಬಂದರ್ ನಲ್ಲಿ 3 ಸಾವಿರ ಕೆಜಿ ಡ್ರಗ್ ಸಿಕ್ಕಿದೆ. 25 ಸಾವಿರ ಕೆ.ಜಿ. ಹೆರಾಯಿನ್ ಸಿಕ್ಕಿದೆ. ಇದು ಪಾಕಿಸ್ತಾನ ಮತ್ತು ಅಫಘಾನಿಸ್ಥಾನದಿಂದ ಬರುತ್ತಿದೆ. ಯುವಕರಿಗೆ ಉದ್ಯೋಗ ಕೊಡಿ ಎಂದರೆ ನಶೆ ಕೊಡುತ್ತಿದ್ದಾರೆ. ಮೋಹನ್ ಭಾಗವತ್ ಕೂಡ ಡ್ರಗ್ ಹಾವಳಿ ಹೆಚ್ಚಾಗ್ತಿದೆ ಎಂದು ಹೇಳಿದ್ದಾರೆ. ಕಳೆದ ಏಳು ವರ್ಷಗಳಿಂದ ಇವರದ್ದೆ ಸರ್ಕಾರ ಆಳ್ವಿಕೆಯಲ್ಲಿದೆ. ಇದಕ್ಕೆ ಕಡಿವಾಣ ಹಾಕಲು ಆಗುತ್ತಿಲ್ಲ ಎಂದು ಆರೋಪಿಸಿದ ಅವರು, ಸಿಬಿಐ, ಇಡಿಗಳೆಲ್ಲ ಯಡಿಯೂರಪ್ಪ ಪಿಎಗಳಿಗೆ ತೊಂದರೆ ಕೊಡಲು ಬಿಟ್ಟಿದ್ದಾರೆ ಎಂದರು.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಕ್ಕಾ ಎಂದ ಬಿಎಸ್ವೈ

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಮತದಾರರು ನಮ್ಮ ಜೊತೆಗಿದ್ದಾರೆ. ಮೋದಿ ಸಾಧನೆ, ನಾವಿದ್ದಾಗ ಕೊಟ್ಟ ಯೋಜನೆಗಳನ್ನು ಮತದಾರರಿಗೆ ತಿಳಿಸುತ್ತೇವೆ. ಸಿಂದಗಿಯ ಎರಡು ಸಮಾವೇಶ ಕಂಡು ಜೆಡಿಎಸ್, ಕಾಂಗ್ರೆಸ್ ಗೆ ಮನವರಿಕೆಯಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಆರೆಸ್ಸೆಸ್ ವಿರುದ್ಧ ಮುಗಿಬಿದ್ದಿರುವ
ಕುಮಾರಸ್ವಾಮಿ ನಡೆಗೆ ಆಕ್ರೋಶ ಹೊರಹಾಕಿದ ಬಿಎಸ್ ವೈ, ಆರೆಸ್ಸೆಸ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ.‌ ಮುಂದೆ‌ ಎಚ್ಡಿಕೆ ಪಶ್ಚಾತ್ತಾಪ ಪಡುತ್ತಾರೆ. ರಾಷ್ಟ್ರಪತಿ, ಪ್ರಧಾನಿ, ಬಹುತೇಕ ಮುಖ್ಯಮಂತ್ರಿಗಳು ಆರ್ ಎಸ್ ಎಸ್ ಮೂಲದವರು. ದೇಶಕ್ಕಾಗಿ ಸರ್ವತ್ಯಾಗ ಮಾಡುವ ಗುಣ ಕಲಿಸಿದ್ದೆ ಆರೆಸ್ಸೆಸ್.

ಮುಸ್ಲಿಮರ ಓಲೈಕೆಗೆ ಕುಮಾರಸ್ವಾಮಿ ಹೀಗೆ ಮಾತನಾಡುತ್ತಿದ್ದಾರೆ. ಆರೆಸ್ಸೆಸ್ ವಿರುದ್ಧ ಮಾತಾಡಿದರೆ ಮುಸ್ಲಿಮರ ವೋಟು ಸಿಗುತ್ತವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ತಿರುಗೇಟು ನೀಡಿದರು.

ಉಪ‌ಚುನಾವಣೆ ಬಳಿಕ ರಾಜ್ಯ ಪ್ರವಾಸ

ಮುಂಬರುವ ಸಾರ್ವತ್ರಿಕ ಚುನಾವಣೆಯ ದೃಷ್ಟಿಯಿಂದ ಉಪ ಚುನಾವಣೆ ಬಳಿಕ ರಾಜ್ಯ ಪ್ರವಾಸ ಆರಂಭಿಸುತ್ತೇನೆ. ಪ್ರತಿ ಜಿಲ್ಲೆ ಜಿಲ್ಲೆಗೂ ಭೇಟಿ ನೀಡುವೆ. ಪ್ರಧಾನಿ ಮೋದಿ, ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್-ಬಿಜೆಪಿ ಎರಡೂ ಪರ್ಸೆಂಟೇಜ್ ಪಕ್ಷಗಳು

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕಾಂಗ್ರೆಸ್- ಬಿಜೆಪಿ ಎರಡು ಪಕ್ಷಗಳೂ ಪರ್ಸೆಂಟೇಜ್ ತೆಗೆದುಕೊಳ್ಳುವುದರಲ್ಲಿ ಮುಂದಿದ್ದಾರೆ. ಇಬ್ಬರೂ ಜನತೆಯ ದುಡ್ಡನ್ನು ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದ ಜನತೆ ಎರಡೂ ಪಕ್ಷಗಳಿಗೆ ಪಾಠ ಕಲಿಸಲು ಮನಸ್ಸು ಮಾಡಬೇಕಿದೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಂದಗಿಯಲ್ಲಿ ಜೆಡಿಎಸ್- ಬಿಜೆಪಿ ಮಧ್ಯೆ ಹೋರಾಟ ಇದ್ದು, ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಕುಮಾರಸ್ವಾಮಿ ಕಾಲು ಕೆರೆದು ಜಗಳಕ್ಕೆ ಬರ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಕಾಲು ಕೆರೆದುಕೊಂಡು ಬರೋಕೆ ನನಗೆ ಬೇರೆ ಕೆಲಸ ಇಲ್ವಾ ? ಅವರು ನನ್ನ ಸುದ್ದಿಗೆ ಬರದೆ ಇದ್ದರೆ ನಾನ್ಯಾಕೆ ಅವರ ತಂಟೆಗೆ ಹೋಗುತ್ತೇನೆ. ಕಾಂಗ್ರೆಸ್ ನಾಯಕರ ರೀತಿ ವೈಯಕ್ತಿಕವಾಗಿ ಮತ ಪಡೆಯುವ ಅವಶ್ಯಕತೆ ನಮಗಿಲ್ಲ ಎಂದರು.

ಪುಟಗೋಸಿ ವಿರೋಧ ಪಕ್ಷದ ಸ್ಥಾನ ಹೇಳಿಕೆ ಸಮರ್ಥಿಸಿಕೊಂಡ ಮಾಜಿ ಸಿಎಂ, ವಿರೋಧ ಪಕ್ಷದ ಸ್ಥಾನಕ್ಕೆ ಗೌರವ ಕೊಡುತ್ತೇನೆ. ಆದರೆ, ಆ ಸ್ಥಾನದಲ್ಲಿರುವ ಸಿದ್ದರಾಮಯ್ಯ ನಡವಳಿಕೆ ಬಗ್ಗೆ ನಾನು ಮಾತಾಡಿದ್ದೇನೆ ಎಂದ ಅವರು, ಜಮೀರ್ ಬಗ್ಗೆ ನಾನು ಚರ್ಚೆ ಮಾಡಲ್ಲ. ದೇವರಿದ್ದಾನೆ ನೋಡಿಕೊಳ್ಳುತ್ತಾನೆ ಎಂದು ಹೇಳಿದರು.

ಸಾಯೋದರೊಳಗೆ ಪ್ರಾದೇಶಿಕ ಪಕ್ಷದ ಸರ್ಕಾರ ನೋಡುವ ಆಸೆ

  • ಸಿಂದಗಿಯ ಚಟ್ಟರಕಿ ಗ್ರಾಮದಲ್ಲಿ ಭಾವುಕರಾದ ಮಾಜಿ ಪ್ರಧಾನಿ ದೇವೇಗೌಡ

ವಿಜಯಸಾಕ್ಷಿ ಸುದ್ದಿ, ಸಿಂದಗಿ

ನಾನು ಎಷ್ಟು ದಿನ ಬದುಕುತ್ತೇನೊ ಗೊತ್ತಿಲ್ಲ. ನಾನು ಸತ್ತರೂ ಪ್ರಾದೇಶಿಕ ಪಕ್ಷ ಜೀವಂತ ಇರಬೇಕು. ನನ್ನ ಆಯುಸ್ಸು ಮುಗಿವುದೊರಳಗೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಆಡಳಿತಕ್ಕೆ ಬರಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಸಿಂದಗಿಯ ಚಟ್ಟರಕಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಪರ ಮಾತಯಾಚಿಸಿ ಮಾತನಾಡಿದ ಅವರು, ನಿಮ್ಮಲ್ಲಿ ಮತಭಿಕ್ಷೆ ಬೇಡುತ್ತೇನೆ. ನನ್ನ ಕೊನೆಯ ಘಟ್ಟದಲ್ಲಿ ಕೇಳುತ್ತಿದ್ದೇನೆ. ಜೆಡಿಎಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಿ. ಇನ್ನು ಎಷ್ಟು ದಿನ ಬದುಕುತ್ತೇನೋ ದೇವರು ಆಯುಷ್ಯ ಕೊಡಬೇಕಷ್ಟೆ ಎಂದು ಭಾವುಕರಾದರು.

error: Content is protected !!