ಬೆಂಗಳೂರು ;- ಖಾಸಗಿ ಶಾಲೆಗಳ ಆಡಳಿತ ಮತ್ತು ಒಳಿತಿಗಾಗಿ ಮೀಸಲಿರುವ ರೂಪ್ಸಾ ಸಂಘಟನೆಗಾಗಿ ಎರಡು ಬಣಗಳಿಂದ ಗುದ್ದಾಟ ನಡೆದಿದೆ. ಖಾಸಗೀ ಶಾಲಾ ಸಂಘಟನೆ ಹೆಸರಿಗಾಗಿ ಎರಡು ಬಣಗಳಿಂದ ಪೀಕಲಾಟ ಶುರುವಾಗಿದೆ. ಒಂದು ಕಡೆ ಲೋಕೇಶ್ ತಾಳಿಕಟ್ಟೆ ಮತ್ತೊಂದು ಕಡೆ ಆಲನೂರಿ ಲೇಪಾಕ್ಷಿಯಿಂದ ಹೋರಾಟ ನಡೆಯುತ್ತಿದೆ.
ರುಪ್ಸಾ (RUPSA) ಸಂಘಟನೆ ಹೆಸರಿಗಾಗಿ ಎರಡು ಬಣಗಳು ಕೋರ್ಟ್ ಮೆಟ್ಟಿಲೇರಿವೆ. ರುಪ್ಸಾ ಸಂಘಟನೆ ನಿಮ್ಮದಲ್ಲ ನಮ್ಮದು ಎಂದು ಕೆಸರೆರಚಾಟ ನಡೆಯುತ್ತಿದೆ. ಸಧ್ಯ ಇದೀಗ ಈ ಕೆಸರೆರಚಾಟ ಮತ್ತೊಮ್ಮೆ ಕೋರ್ಟ್ ಗೆ ಹೋಗುವ ಸಾಧ್ಯತೆ ಇದೆ.
ಹೌದು, ಆಲನೂರು ಲೇಪಾಕ್ಷಿ ಎಂಬುವವರಿಂದ ರುಪ್ಸಾ ಕರ್ನಾಟಕ ಸಂಘಟನೆ ಹೆಸರು ಬಳಸಿಕೊಂಡು ಅಧಿಕಾರಿಗಳ ಬಳಿ ಧಮ್ಕಿ ಆರೋಪ ಕೇಳಿ ಬಂದಿದೆ. ರುಪ್ಸಾ ಸಂಘಟನೆಯಲ್ಲಿ ಸದಸ್ಯರೇ ಅಲ್ಲದಿದ್ರೂ ನಕಲಿ ಪತ್ರ ಬಳಕೆ ಮಾಡಿ ಸಿಎಂ ಗೆ ದೂರು ನೀಡಿದ್ದಾರೆ. ಆಲನೂರು ಲೇಪಾಕ್ಷಿಯಿಂದ ನಕಲಿ ರುಪ್ಸಾ ಕರ್ನಾಟಕ ಲೆಟರ್ ಮೂಲಕ ಪತ್ರ ಬರೆದಿದ್ದು, ಹೀಗಾಗಿ ರುಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆಯಿಂದ ದೂರು ದಾಖಲಾಗಿದೆ. ಪಶ್ಚಿಮ ವಿಭಾಗದ ಪೊಲೀಸ್ ಉಪ ಆಯುಕ್ತರಿಗೆ ದೂರು ತಾಳಿಕಟ್ಟೆ ಸಲ್ಲಿಸಿದ್ದಾರೆ. ರುಪ್ಸಾ ಸಂಘಟನೆ ಹೆಸರು ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಬಳಿ ಲಂಚ ಕೇಳಲಾಗ್ತಿದೆ. ಆಲನೂರು ಲೇಪಾಕ್ಷಿ ರುಪ್ಸಾ ಕರ್ನಾ ಸಂಘಟನೆಯ ಸದಸ್ಯರೇ ಅಲ್ಲ. ಹೀಗಾಗಿ ಅವರ ವಿರುದ್ದ ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಒತ್ತಾಯ ಮಾಡಲಾಗಿದೆ.



