HomeGadag Newsಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ : ವಿನಯ್ ಕುಲಕರ್ಣಿ

ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ : ವಿನಯ್ ಕುಲಕರ್ಣಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಮ್ಮ ಸಮಾಜವು ಕಾಂಗ್ರೆಸ್ ಪಕ್ಷದ ಪರವಾಗಿ ಇದೆ ಅನ್ನುವುದಕ್ಕೆ ನಾನೇ ಸಾಕ್ಷಿ. ನನ್ನನು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷನನ್ನಾಗಿ ಮಾಡಿದೆ. ಉನ್ನತ ಹುದ್ದೆ ನೀಡಿ ನಮ್ಮ ಸಮಾಜಕ್ಕೆ ಶಕ್ತಿ ತುಂಬಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶಕ್ತಿ ತುಂಬೊಣ. ನಿಮ್ಮ ಹಿಂದೆ ನಾನು ಯಾವಾಗಲೂ ಇರುತ್ತೇನೆ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿ ಸಮಾಜದ ವತಿಯಿಂದ ಗುರುವಾರ ಗದಗ ನಗರದ ಎಪಿಎಮ್‌ಸಿಯಲ್ಲಿ ಸಿದ್ದನಗೌಡ ಪಾಟೀಲರ ವಕಾರದಲ್ಲಿ ಹಮ್ಮಿಕೊಂಡಿದ್ದ ಸಮಾಜ ಬಾಂಧವರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅನಿಲಕುಮಾರ ಪಾಟೀಲ್ ಪ್ರಾಸ್ತವಿಕವಾಗಿ ಮಾತನಾಡಿ, ನಮ್ಮ ಸಮಾಜವು ಗದಗ ಜಿಲ್ಲೆಯಲ್ಲಿ ಯಾವಾಗಲೂ ಕಾಂಗ್ರೆಸ್ ಪಕ್ಷದ ಪರವಾಗಿ ಇದೆ ಅನ್ನುವುದಕ್ಕೆ ಈ ಸಭೆಯೇ ಸಾಕ್ಷಿಯಾಗಿದೆ. ನಾವೆಲ್ಲರೂ ಸೇರಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲ್ಲುವಿನಲ್ಲಿ ಸಕ್ರಿಯವಾಗಿ ದುಡಿಯೋಣ ಎಂದರು.

ಕಾರ್ಯಕ್ರಮದಲ್ಲಿ ಏಅಅ ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ಕಲಗುಡಿ, ಬಸವರಾಜ್ ಮನಗುಂಡಿ, ಚೆನ್ನವೀರ ಮಳಗಿ, ಸಿ.ಕೆ. ಮಾಳಶೆಟ್ಟಿ, ಕೊಟ್ರಗೌಡ ಪಾಟೀಲ, ಬಸವರಾಜ್ ದೇಸಾಯಿ, ಎಸ್.ವಿ. ಕೋಟಗಿ, ಮೋಹನ್ ಕಮತರ, ಕಿರಣ್ ಕಮತರ, ಶರಣಪ್ಪ ಗೋಳಗೊಳಕಿ, ಶರಣು ಬೋಳನವರ, ಲಲಿತಾ ಗೋಳಗೊಳಕಿ, ರುದ್ರಮ್ಮ ಕೆರಕಲಮಟ್ಟಿ, ಲಕ್ಷ್ಮಿ ದ್ಯಾಪನಗೌಡ್ರು, ಶಿವಪ್ಪ ಮುಳುಗುಂದ, ಬುದಪ್ಪ ಅಂಗಡಿ, ಅಶೋಕ್ ಶಿರಹಟ್ಟಿ, ಮುತ್ತು ಮುಳವಾಡ, ರಮೇಶ ರೋಣದ, ಸಂತೋಷ್ ಗುಡ್ಡದ, ಸಂಗಮೇಶ್ ಕವಳಿಕಾಯಿ ಮುಂತಾದವರಿದ್ದರು.

ಮುಂಡರಗಿ ತಾಲೂಕಿನ ಹಿರಿಯರಾದ ಕೊಟ್ರಗೌಡ ಪಾಟೀಲ್ ಮಾತನಾಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಸನ್ನದ್ಧರಾಗೋಣ ಎಂದರು.ವಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ಬೋಳನವರ ಮಾತನಾಡಿ, ಕಾಂಗ್ರೆಸ್ ಪಕ್ಷವು ನಮ್ಮ ಸಮಾಜದ ಮಹಿಳೆಯರಿಗೆ ಹಲವಾರು ಅವಕಾಶಗಳನ್ನು ನೀಡಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img