HomeGadag Newsರಥಬೀದಿ ತೆರವಿಗೆ ಒತ್ತಾಯಿಸಿ ಧರಣಿ

ರಥಬೀದಿ ತೆರವಿಗೆ ಒತ್ತಾಯಿಸಿ ಧರಣಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದಾರ್ಯ ಮಠದ ಜಾತ್ರೆ ನಂತರ ರಥಬೀದಿಯಲ್ಲಿ ನಡೆಯುತ್ತಿರುವ ಅಕ್ರಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ದಲಿತ ಮಿತ್ರ ಮೇಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿರುವ ದಲಿತ ಮಿತ್ರ ಮೇಳದ ಸದಸ್ಯರು, ಈ ಹಿಂದೆ ತೋಂಟದಾರ್ಯ ಮಠದ ಜಾತ್ರೆ ನಂತರ 5 ದಿನ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಕೆಲ ವರ್ಷಗಳಿಂದ 10-15 ದಿನ ನಡೆಯುತ್ತಿತ್ತು. ಆದರೆ ಸದ್ಯ ರಥೋತ್ಸವ ಮುಗಿದು 2 ತಿಂಗಳು ಕಳೆದರೂ ಅಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಅಕ್ರಮ ವ್ಯಾಪಾರ ವಹಿವಾಟಿನಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರು ಬೀದಿಗೆ ಬರುವಂತಾಗಿದೆ. ಕೇವಲ 10 ದಿನ ಪರವಾನಗಿ ಪಡೆದು 2 ತಿಂಗಳಿಂದ ಭೂ ಬಾಡಿಗೆಯೂ ಇಲ್ಲದೇ ವ್ಯಾಪಾರ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಜಾತ್ರಾ ಕಮಿಟಿ ಕಾರಣವಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ರಥಬೀದಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಸ್ಥಳೀಯ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಲಿತ ಮಿತ್ರ ಮೇಳದ ಅಧ್ಯಕ್ಷ ಕುಮಾರ ನಡಗೇರಿ, ಹುಲುಗಪ್ಪ ವಾಲ್ಮೀಕಿ, ವೆಂಕಟೇಶ ದೊಡ್ಡಮನೆ, ಶಶಿಕುಮಾರ ಹಾಕ್ರಿಕಿ, ಅನಿಲ ಮುಳ್ಳಾಳ, ಶಿವು ಬಂಗಾರಿ, ಬಸವರಾಜ ನವಲಿ, ನೂತನ ಮುರಗೋಡ, ಮಂಜು ವಾಲ್ಮೀಕಿ, ಬಸವರಾಜ ಬನ್ನಿಮರದ, ಸಂತೋಷ ಕುರಿ, ಪುಟ್ಟರಾಜ ಕಳಸಣ್ಣವರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img