ಗದಗ ನಗರದ ಹಳೇ ಸರಾಫ ಬಜಾರದಲ್ಲಿರುವ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಎಲ್ಲ ಸುಮಂಗಲಿಯರಿಗೆ ಸೇಬುಹಣ್ಣು, ಎಲೆ, ಅಡಿಕೆ, ಹೂವುಗಳೊಂದಿಗೆ ಉಡಿ ಸೇವೆಯನ್ನು ನಗರದ ವ್ಯಾಪಾರಸ್ಥರಾದ ರಾಜು ಬದಿ, ರಿತೇಶ ಕಾಟವಾ, ದೀಪಕ ಕಬಾಡಿ, ನಂದಕುಮಾರ ಬಸವಾ, ಸತೀಶ ಕಬಾಡಿ ಕುಟುಂಬದವರು ಸೇವೆಗೈದು ಶ್ರೀ ತುಳಜಾಭವಾನಿ ದೇವಿಯ ಕೃಪೆಗೆ ಪಾತ್ರರಾದರು.