HomeLife Styleಆಲ್ಕೋಹಾಲ್ ಜೊತೆ ಈ ಆಹಾರ ತಿಂದರೆ ಅಪಾಯ ಗ್ಯಾರಂಟಿ! ಯಾಕೆ ಗೊತ್ತಾ..?

ಆಲ್ಕೋಹಾಲ್ ಜೊತೆ ಈ ಆಹಾರ ತಿಂದರೆ ಅಪಾಯ ಗ್ಯಾರಂಟಿ! ಯಾಕೆ ಗೊತ್ತಾ..?

For Dai;y Updates Join Our whatsapp Group

Spread the love

ಇಂದಿನ ವೇಗದ ಜೀವನಶೈಲಿಯಲ್ಲಿ ಹಲವರಿಗಾಗಿ ಮದ್ಯಪಾನ ಒಂದು ಸಾಮಾನ್ಯ ಅಭ್ಯಾಸವಾಗುತ್ತಿದೆ. ಕೆಲವರು ಒತ್ತಡ ಕಡಿಮೆ ಮಾಡಲು, ಮತ್ತಿಬ್ಬರು ಸ್ನೇಹಿತರ ಜೊತೆ ಖುಷಿಯನ್ನು ಹಂಚಿಕೊಳ್ಳಲು ಆಲ್ಕೋಹಾಲ್‌  ಸೇವಿಸುತ್ತಾರೆ. ಮದ್ಯಪಾನ ಮಾಡುವ ಸಮಯದಲ್ಲಿ ಹಲವರು ಸೈಡ್ ಡಿಷ್ ಆಗಿ ಉಪ್ಪಿನಕಾಯಿ, ಕಬಾಬ್, ಕುರುಕುಲು ತಿಂಡಿ ಅಥವಾ ಖಾರ ತಿನಿಸುಗಳನ್ನು ತಿನ್ನುವ ಅಭ್ಯಾಸ ಹೊಂದಿದ್ದಾರೆ.

ಆದರೆ ಮದ್ಯ ಸೇವಿಸುವಾಗ ಕೆಲವು ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಮದ್ಯದ ಜೊತೆ ಈ ಕೆಳಗಿನ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಬ್ರೆಡ್‌ ಆಧಾರಿತ ಆಹಾರ

ಬಿಯರ್ ಕುಡಿಯುವ ಸಮಯದಲ್ಲಿ ಸ್ಯಾಂಡ್‌ವಿಚ್‌, ಬರ್ಗರ್‌ ಮುಂತಾದ ಬ್ರೆಡ್‌ ಆಧಾರಿತ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಬಿಯರ್ ಮತ್ತು ಬ್ರೆಡ್ ಎರಡರಲ್ಲೂ ‘ಯೀಸ್ಟ್’ ಇರುವುದರಿಂದ, ಇವು ಒಟ್ಟಿಗೆ ಹೊಟ್ಟೆಗೆ ಹೋದಾಗ ಉಬ್ಬರ ಹಾಗೂ ಗ್ಯಾಸ್ ಸಮಸ್ಯೆ ಉಂಟಾಗಬಹುದು. ಇದು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ಆದ್ದರಿಂದ ಈ ಸಂದರ್ಭಗಳಲ್ಲಿ ಬೇಯಿಸಿದ ತರಕಾರಿಗಳು ಅಥವಾ ತರಕಾರಿ ಸಲಾಡ್ ಸೇವಿಸುವುದು ಉತ್ತಮ.

ಚಾಕೊಲೇಟ್

ಚಾಕೊಲೇಟ್ ನಲ್ಲಿ ಕೆಫೀನ್ ಮತ್ತು ಕೋಕೋ ಇರುವುದರಿಂದ ಆಮ್ಲೀಯತೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನು ಮದ್ಯದೊಂದಿಗೆ ಸೇವಿಸಿದರೆ ಗ್ಯಾಸ್, ಆಮ್ಲೀಯತೆ ಹಾಗೂ ಆಸಿಡ್ ರಿಫ್ಲಕ್ಸ್ ಸಮಸ್ಯೆಗಳು ಹೆಚ್ಚಾಗಬಹುದು. ಕೆಲವೊಮ್ಮೆ ಎದೆಯುರಿಯೂ ಉಂಟಾಗಬಹುದು.

ಕಾಳುಗಳು

ಕಡಲೆ, ಬಟಾಣಿ ಮುಂತಾದ ಕಾಳುಗಳು ಫೈಬರ್‌ ಹೆಚ್ಚು ಹೊಂದಿರುತ್ತವೆ. ಇವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಈ ಆಹಾರಗಳೊಂದಿಗೆ ಮದ್ಯ ಸೇವಿಸಿದರೆ ಜೀರ್ಣಕ್ರಿಯೆ ನಿಧಾನವಾಗಿ ನಡೆಯುತ್ತದೆ. ಇದರಿಂದ ಹೊಟ್ಟೆ ನೋವು ಮತ್ತು ಅಜೀರ್ಣ ಸಮಸ್ಯೆಗಳು ಉಂಟಾಗಬಹುದು.

ಕರಿದ ತಿಂಡಿಗಳು

ಚಿಪ್ಸ್‌,ಕರಿದ ತಿಂಡಿಗಳು ಡೀಪ್‌ ಫ್ರೈಡ್‌ ಆಹಾರಗಳನ್ನು ಮದ್ಯದ ಜೊತೆ ತಿನ್ನುವುದು ಸಾಮಾನ್ಯ. ಆದರೆ ಈ ಆಹಾರಗಳಲ್ಲಿ ಹೆಚ್ಚಿನ ಉಪ್ಪು ಇರುವುದರಿಂದ ದೇಹದಿಂದ ನೀರು ಕಡಿಮೆಯಾಗುತ್ತದೆ. ಮದ್ಯವೂ ದೇಹವನ್ನು ನಿರ್ಜಲೀಕರಣಗೊಳಿಸುವುದರಿಂದ ಎರಡೂ ಸೇರಿ ದೇಹದಲ್ಲಿ ನೀರಿನ ಕೊರತೆ ಉಂಟುಮಾಡಬಹುದು. ಇದರಿಂದ ಮರುದಿನ ತಲೆನೋವು ಮತ್ತು ಆಯಾಸ ಹೆಚ್ಚಾಗಬಹುದು.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು ಹಣ್ಣುಗಳಲ್ಲಿ ಆಮ್ಲೀಯತೆ ಹೆಚ್ಚಾಗಿರುತ್ತದೆ. ಮದ್ಯದೊಂದಿಗೆ ಇವುಗಳನ್ನು ಸೇವಿಸಿದರೆ ಹೊಟ್ಟೆಯಲ್ಲಿ ಉರಿ ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮದ್ಯಪಾನದ ಸಮಯದಲ್ಲಿ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಒಟ್ಟಿನಲ್ಲಿ, ಮದ್ಯಪಾನ ಮಾಡುವ ಸಂದರ್ಭದಲ್ಲೂ ಸರಿಯಾದ ಆಹಾರ ಆಯ್ಕೆ ಮಾಡುವುದು ಆರೋಗ್ಯ ಕಾಪಾಡಿಕೊಳ್ಳಲು ಅತ್ಯಂತ ಮುಖ್ಯವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!