ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಹಾಲಗೊಂಡ ಬಸವೇಶ್ವರ ರಥೋತ್ಸವವು ಸೋಮವಾರ ಸಂಜೆ ಸಾವಿರಾರು ಭಕ್ತಾಧಿಗಳ ಮಧ್ಯೆ ಭಕ್ತಿ ಭಾವದಿಂದ ಜರುಗಿತು.
ಬಜಾರ ರಸ್ತೆಯ ಕೆ.ಜಿ.ಎಸ್. ಶಾಲೆಯಿಂದ ಆರಂಭಗೊಂಡು ವಿರುಪಾಕ್ಷೇಶ್ವರ ದೇವಸ್ಥಾನದವರೆಗೂ ರಥೋತ್ಸವ ಸಾಗಿತು. ರಥೋತ್ಸವದಲ್ಲಿ ಭಾಗವಹಿಸಿದ ಡೊಳ್ಳು ಕುಣಿತವು ಜನ ಮನ ಸೆಳೆಯಿತು. ಇದಕ್ಕೂ ಪೂರ್ವ ಶೇಡದವರ ಮನೆಯಿಂದ ನೈವೇದ್ಯವನ್ನು ತಂದು ದೇವಸ್ಥಾನಕ್ಕೆ ತಲುಪಿಸಿದ ನಂತರ ತೇರನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.



