HomeGadag Newsಕ್ರಾಂತಿ ಸೇನಾ ಪದಾಧಿಕಾರಿಗಳ ಆಯ್ಕೆ

ಕ್ರಾಂತಿ ಸೇನಾ ಪದಾಧಿಕಾರಿಗಳ ಆಯ್ಕೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕ್ರಾಂತಿ ಸೇನಾ ತಾಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಬೆಟಗೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧ್ಯಕ್ಷ ಬಾಬು ಬಾಕಳೆ ಹಾಗೂ ತಾಲೂಕಾಧ್ಯಕ್ಷ ಭರತ್ ಮರೆಪ್ಪನವರ್ ನೇತೃತ್ವದಲ್ಲಿ ಕ್ರಾಂತಿ ಸೇನಾ ತಾಲೂಕು ಸಂಚಾಲಕರಾಗಿ ನವೀನ್ ಜಂತ್ಲಿ, ತಾಲೂಕು ಉಪಾಧ್ಯಕ್ಷರಾಗಿ ಬಸವರಾಜ್ ಕಟ್ಟಿ, ತಾಲೂಕು ಸಹ ಕಾರ್ಯದರ್ಶಿಯಾಗಿ ವಿನಾಯಕ ಕಾಟವಾ, ತಾಲೂಕು ಕಾರ್ಯದರ್ಶಿಯಾಗಿ ರವಿತೇಜ ಶ್ಯಾವಿ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ ಜಿಲ್ಲಾಧ್ಯಕ್ಷರು ಬಾಬು ಬಾಕಳೆ ಮಾತನಾಡಿ, ನಾವೆಲ್ಲಾ ಹಿಂದೂ ಯುವಕರು ಒಗ್ಗಟ್ಟಿನಿಂದ ಹಿಂದುತ್ವದ ಸೇವೆ ಮಾಡೋಣ ಎಂದರು. ಗದಗ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ ಮಾತನಾಡಿ, ಕ್ರಾಂತಿ ಸೇನಾ ಸಂಘಟನೆ ತಾಲೂಕು ಮಟ್ಟದ ಜವಾಬ್ದಾರಿ ಸ್ವೀಕಾರ ಮಾಡಿದ ಯುವಕರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ರಾಣಿ ಚಂದಾವರಿ, ನಿಖಿತಾ ಸುತಾರ್, ಮಹಾನಂದ ಪತ್ತಾರ್, ಶಿವಕುಮಾರ್ ಕುಂಬಾರ್, ರಾಮು ಕಬಾಡಿ, ಪ್ರದೀಪ್ ಸರ್ವದೆ, ರಾಮ ನವಲಗುಂದ, ಯಲ್ಲಪ್ಪಾ ಸಿದ್ಲಿಂಗ್ ಸೇರಿದಂತೆ ಓಣಿಯ ಮಹಿಳೆಯರು, ಗುರು-ಹಿರಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img