ಬೆಟಗೇರಿಯ ಈದಗಾ ಕಮಿಟಿ ವತಿಯಿಂದ ಸೋಮವಾರ ನಡೆದ ಪ್ರವಾದಿ ಮುಹಮ್ಮದ ಪೈಗಂಬರ್ ಜಯಂತಿಯಲ್ಲಿ ಮುಸ್ಲಿಂ ಧರ್ಮೀಯರ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಈದಗಾ ಕಮಿಟಿಯ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷರಾದ ಪೀರಸಾಬ ಕೌತಾಳರನ್ನು ಸನ್ಮಾನಿಸಿ, ಗೌರವಿಸಿದರು.