Homecultureವೈಭವದ ಶ್ರೀ ಅನ್ನದಾನೇಶ್ವರ ಮಹಾ ರಥೋತ್ಸವ

ವೈಭವದ ಶ್ರೀ ಅನ್ನದಾನೇಶ್ವರ ಮಹಾ ರಥೋತ್ಸವ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಅಬ್ಬಿಗೇರಿಯಲ್ಲಿ ಹಾಲಕೆರೆ ಶ್ರೀ ಗುರು ಅನ್ನದಾನೇಶ್ವರರ ಶಾಖಾ ಮಠದ ಮಹಾ ರಥೋತ್ಸವವು ಸಡಗರ ಸಂಭ್ರಮದಿಂದ ವೈಭವಯುತವಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಸಂಜೆ 6ಕ್ಕೆ ಶ್ರೀ ಅನ್ನದಾನೇಶ್ವರ ಮಹಾರಥೋತ್ಸವಕ್ಕೆ ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರು ಚಾಲನೆ ನೀಡಿದರು. ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ, ಬನವಾಸಿಯ ಶಿವಲಿಂಗ ದೇಶಿಕರು ಸಮ್ಮುಖ ವಹಿಸಿದ್ದರು. ಗ್ರಾಮದ ಸುತ್ತಮುತ್ತಲಿನ ಊರುಗಳಿಂದ ಡೊಳ್ಳು, ಭಜನೆ ಸಕಲ ವಾದ್ಯ ವೈಭವದೊಂದಿಗೆ ಭಕ್ತರು ಭಾಗವಹಿಸಿದ್ದರು.

ಮರವಣಿಗೆಯುದ್ದಕ್ಕೂ ಕರಡಿ ಮಜಲು, ಜಾಂಜ್ ಮೇಳ, ಭಜನೆ ಮುಂತಾದವುಗಳು ಜಾತ್ರೆಯ ಸಡಗರವನ್ನು ಹೆಚ್ಚಿಸಿದ್ದವು. 150ಕ್ಕೂ ಹೆಚ್ಚು ಸುಮಂಗಲೆಯರು ಆರತಿಯನ್ನು ಹಿಡಿದು ತೇರಿನ ಹಿಂದೆ ಸಾಗಿದರು.

ಸಂಜೆಯಾಗುತ್ತಿದ್ದಂತೆ ಹಾಲಕೆರೆಯ ಶ್ರೀಮಠದ ಪರಮಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮತ್ತು ಹರಗುರು ಚರ ಮೂರ್ತಿಗಳು, ಗಣ್ಯರು ರಥದ ಗಾಲಿಗಳಿಗೆ ಪೂಜೆ ನೆರವೇರಿಸಿದ ನಂತರ ಸೇರಿದ್ದ ಸಹಸ್ರಾರು ಭಕ್ತರು ತೇರನ್ನು ಎಳೆದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಚಲಿಸಿದ ರಥವು ಮರಳಿ ಸ್ವಸ್ಥಾನ ಸೇರಿದಾಗ ಸಂತೋಷದಿಂದ ಚಪ್ಪಾಳೆ ತಟ್ಟಿ ಭಕ್ತಿಭಾವ ಮೆರದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!