ಶ್ರಾವಣ ಮಾಸದ ಎರಡನೇ ಶುಕ್ರವಾರ ವರಲಕ್ಷ್ಮಿ ಪೂಜೆಯನ್ನು ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಎಸ್.ಟಿ. ಹಿರೇಮಠ ಗಿರಿಜಾ ಶಂಕರ ನಿಲಯದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಸುಮಂಗಲೆಯರು ಮಂಗಳಾರತಿ ಮಾಡಿ ದೇವಿಯ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗಿರಿಜಾದೇವಿ ಹಿರೇಮಠ, ಸಹನಾ ಪ್ರಸಾದ ಹಿರೇಮಠ, ಸ್ನೇಹಾ ವಿಜಯಕುಮಾರ ಹಿರೇಮಠ ಸೇರಿದಂತೆ ಮುಂತಾದವರಿದ್ದರು.