ವಿಜಯಸಾಕ್ಷಿ ಸುದ್ದಿ, ಗದಗ
ಈಶ್ವರ ದೇವಸ್ಥಾನದ ಪಕ್ಕದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್- ಬಾಹರ್ ಜೂಜಾಟದಲ್ಲಿ ತೊಡಗಿದ್ದ 10 ಜನರ ತಂಡವನ್ನು ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಈಶ್ವರ ದೇವಸ್ಥಾನದ ಬಳಿ ಜೂಜಾಟದಲ್ಲಿ ತೊಡಗಿದ್ದ ಬನ್ನಿಕೊಪ್ಪದ ನೀಲಪ್ಪ ಬಸಪ್ಪ ಕಡಕೋಳಿ, ಮುತ್ತಪ್ಪ ಶಿವಪ್ಪ ಬಡ್ನಿ, ವಿಜಯಕುಮಾರ್ ಮಂಜುನಾಥ್ ಹೆಸಿ, ಹನುಮಂತ ಮುರೆಗೆಪ್ಪ ಹಳ್ಳೆಪ್ಪನವರ್, ಬಸಪ್ಪ ಮಲ್ಲಪ್ಪ ಆರೇರ್, ನಾಗಪ್ಪ ಸತ್ಯಪ್ಪ ತಳವಾರ, ಪಕ್ಕೀರಪ್ಪ ರಾಮಣ್ಣ ಪೆಡ್ಡಾರ, ಶ್ರೀಕಾಂತ್ ಶಾಂತಪ್ಪ ಕಂಚಿನಕೋಟಿ, ಮಾಚೇನಹಳ್ಳಿಯ ಶಂಕರ್ ಗೌಡ ಗೋವಿಂದಗೌಡ್ ಪಾಟೀಲ್, ಮುತ್ತಪ್ಪ ಗುಡದಪ್ಪ ಕಮತರ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತರಿಂದ 5930 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂಜಾಟದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಶಿರಹಟ್ಟಿ ಪಿಎಸ್ಐ ನವೀನ್ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.



