ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಹುಬ್ಬಳ್ಳಿಯಿಂದ ಗಂಗಾವತಿ ರೈಲು ದಿನ ನಿತ್ಯ ಓಡಾಡುವುದು ಸಾರ್ವಜನಿಕರಿಗೆ ಅನುಕೂಲವಾಗಿರುವುದು ನಿಜ.
ಆದರೆ ಕಾರಟಗಿ ರಾಯಚೂರುವರೆಗೂ ತಲುಪುವುದು ಯಾವಾಗ? . ಗಂಗಾವತಿ, ಕಂಪ್ಲಿ, ಸಿಂಧನೂರು, ರಾಯಚೂರು ಭಾಗದ ಜನರಿಗೆ ಪ್ರಯಾಣದ ದರದ ಜೊತೆಗೆ ಸಮಯವೂ ಉಳಿತಾಯವಾಗುತ್ತದೆ.
ಆದರೆ ದಿನ ನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುತ್ತಿದ್ದರೂ ಮೂಲಭೂತ ಸೌಕರ್ಯವಿಲ್ಲದೆ ಪರದಾಡುವಂತ ಪರಿಸ್ಥಿತಿ ಈ ಭಾಗದ ಪ್ರಯಾಣಿಕರಿಗೆ ಆಗಿದೆ ಎಂದು ಎಐಡಿವೈಓ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗಡ್ಡಿ ದೂರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗಿಣಿಗೇರಿಯಿಂದ ಮಾರ್ಗ ಬದಲಾಣೆ ಆದ ಮೇಲೆ ಬೂದುಗುಂಪ, ಜಬ್ಬಲಗುಡ್ಡ, ಬೆಣಕಲ್, ಈ ಮೂರು ಸ್ಟೇಷನ್ ಗಳು ಊರಿಂದ ದೂರವಿದ್ದು ಯಾವುದೇ ಮೂಲಭೂತ ಸೌಕರ್ಯಗಳೇ ಇಲ್ಲ, ಮುಖ್ಯವಾಗಿ ರಾತ್ರಿ ಟೈಮ್ ಪ್ಲಾಟ್ ಫಾರ್ಮ್ನಲ್ಲಿ ಒಂದು ಲೈಟ್ ಸಹ ಇಲ್ಲ ಸುತ್ತ ಕತ್ತಲು ಗುಡ್ಡ ಹತ್ತಿರದಲ್ಲಿದೆ ಕಾಡುಪ್ರಾಣಿಗಳ ಅಪಾಯ, ಮಹಿಳೆಯರು, ಮಕ್ಕಳು, ವೃದ್ದರಿಗೆ ಅಪಾಯ ಕಟ್ಟಿಟ್ಟ ಬುತ್ತಿ, ಅನಾಹುತಗಳು ಆಗುವ ಆತಂಕ ಸ್ಥಳೀಯರಿಗೆ ಕಾಡುತ್ತಿದೆ ಎಂದು ಅವರು ದುಗುಡ ತೋಡಿಕೊಂಡಿದ್ದಾರೆ.
ಮುಖ್ಯವಾಗಿ ಲೈಟ್ ಜೊತೆ ಕುಡಿಯುವ ನೀರು ಇಲ್ಲ. ಗಂಗಾವತಿ ಬಿಟ್ಟು ಮೂರು ಸ್ಟೇಷನಲ್ಲಿ ಟಿಕೆಟ್ ಕೊಡುವವರು ಇಲ್ಲ, ಇಂತ ಜಟಿಲ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಕೇವಲ ಟ್ರೈನ್ ಬಿಟ್ಟು ಮೂಲಭೂತ ಸೌಕರ್ಯ ಒದಗಿಸಿಲ್ಲದಿರುವುದು ದುರಂತವೆ ಸರಿ. ಜನಪ್ರತಿನಿದಿನಗಳು, ಸಂಬಂಧಪಟ್ಟ ಅಧಿಕಾರಿಗಳು ಕೊಡಲೇ ಗಮನಹರಿಸಬೇಕು. ರಾತ್ರಿ ಟ್ರೈನ್ ಹೋಗುವ ಸಂದರ್ಭದಲ್ಲಿ ಆರಕ್ಷಕ ಸಿಬ್ಬಂದಿಗಳನ್ನು ಮೂರು ಸ್ಟೇಟಿನಲ್ಲಿ ನಿಯೋಜಿಸಿಬೇಕು.
ಸಾರ್ವಜನಿಕರಿಗೆ ತೊಂದರೆ ಆಗುವ ಮುಂಚೆಯೇ ತುರ್ತಾಗಿ ಕ್ರಮ ಕೈಗೊಂಡು ಪ್ರಯಾಣಿಕರು ನಿರ್ಭಿಡತೆಯಿಂದ ಓಡಾಡಲು ವ್ಯವಸ್ಥೆ ಕಲ್ಪಿಸಬೇಕು, ಕಳೆದ ಒಂದು ವಾರದಿಂದ ಸಾರಿಗೆ ನೌಕರರು ಮುಷ್ಕರ ದಿಂದ ಜನಸಾಮಾನ್ಯರು ರೈಲ್ವೆಗೆ ಹೆಚ್ಚು ಅವಲಂಬಿತವಾಗಿದ್ದರೆ. ಹಾಗಾಗಿ ಕೂಡಲೇ ರೈಲ್ವೆ ಯಲ್ಲಿ ಓಡಾಡುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹ
Advertisement