
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಡಿಸೆಂಬರ್ 24ರಂದು ನಡೆಯಲಿರುವ ಜಿಲ್ಲಾ ನ್ಯಾಯವಾದಿಗಳ ಸಂಘದ ಚುನಾವಣೆಯಲ್ಲಿ ನಮ್ಮ ಪ್ಯಾನಲ್ನ ನ್ಯಾಯವಾದಿಗಳನ್ನು ಸಂಘದ ಮತದಾರ ಬಂಧುಗಳು ಚುನಾಯಿಸಬೇಕೆಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎ.ವಿ.ಕಣವಿ ಮನವಿ ಮಾಡಿದರು.
ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳ ಸಂಕೀರ್ಣ ಸ್ಥಾಪನೆಗೆ ಪ್ರಥಮ ಪ್ರಾಶಸ್ತ್ಯವನ್ನು ನಮ್ಮ ತಂಡ ನೀಡಲಿದೆ. ಯುವ ವಕೀಲರ ಸುಸಜ್ಜಿತ ಬದುಕು ನಿರ್ಮಾಣಕ್ಕಾಗಿ ಕಾರ್ಯಾಗಾರ, ಸಹಕಾರ ಸಂಘ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳ ಸಾಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಕೊಪ್ಪಳ ಜಿಲ್ಲಾ ನ್ಯಾಯವಾದಿಗಳ ಸಂಘದ ಇದುವರೆಗಿನ ಸದಸ್ಯರ ಸಂಖ್ಯೆ 486ರಷ್ಟಿದ್ದು ರೆಗ್ಯುಲರ್ ಆಗಿ ಪ್ರ್ಯಾಕ್ಟೀಸ್ ಮಾಡುತ್ತಿರುವ 338 ಜನ ಸದಸ್ಯರು ಮಾತ್ರ ಮತದಾನ ಮಾಡಲಿದ್ದು, ಈ ಚುನಾವಣೆಯಲ್ಲಿ ನಮ್ಮ ಪ್ಯಾನಲ್ ಗೆಲುವು ಕಾಣುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಎ.ವಿ.ಕಣವಿ, ಉಪಾಧ್ಯಕ್ಷ ಸ್ಥಾನಕ್ಕೆ ದಿವಾಕರ ಬಾಗಲಕೋಟೆ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರವಿ.ಎಸ್.ಬೆಟಗೇರಿ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಗ್ಯಾನಪ್ಪ ಚಿಲಕಮುಖಿ, ಖಜಾಂಚಿ ಸ್ಥಾನಕ್ಕೆ ಚಿದಾನಂದಗೌಡ ಪೊಲೀಸ್ಪಾಟೀಲ ಸ್ಪರ್ಧಿಸಿದ್ದು ಇವರಿಗೆ ಮತದಾರ ಬಂಧುಗಳು ಮತ ನೀಡಬೇಕೆಂದು ಕೋರಿದರು.