HomeCrime Newsಜೂಜಾಟದ ಅಡ್ಡೆಗಳ ಮೇಲೆ ಪೊಲೀಸರ ದಾಳಿ; 15 ಜನರ ಬಂಧನ, ಪುರಸಭೆ ಸದಸ್ಯ ಪರಾರಿ?

ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರ ದಾಳಿ; 15 ಜನರ ಬಂಧನ, ಪುರಸಭೆ ಸದಸ್ಯ ಪರಾರಿ?

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಎರಡು ಪ್ರತ್ಯೇಕ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ 15 ಜನರನ್ನು ಬಂಧಿಸಿ 25 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಮುಕ್ತಿಮಂದಿರದ ಬಳಿ ಇರುವ ಸೂಫಿ ಸ್ಕೂಲ್ ಬಳಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್- ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮಲ್ಲಿಕ್ ಖಾದರಸಾಬ್ ಛೋಪದಾರ, ದಾದಾಪೀರ ಹಜರೇಸಾಬ್ ನಾಲಬಂದಿ, ಸಲ್ಮಾನ್ ನೂರ ಅಹ್ಮದ್ ಮುನಕೇರಿ, ಅಬ್ದುಲ್ ಜಾಫರ್ ಸಾಬ್ ಹುಬ್ಬಳ್ಳಿ, ಶಫೀಯುಲ್ಲಾ ಅಲ್ಲಿಸಾಬ್ ಸಿದ್ದಿ, ಮೆಹಬೂಬ್ ಸಾಬ್ ರಾಜೇಸಾಬ್ ಗುತ್ತಲ್ಲ, ಮಾಬುಸಾಬ್ ಇಬ್ರಾಹಿಮಸಾಬ್ ತಾಡಪತ್ರಿ, ಶಿಕ್ಕೂರಹ್ಮದ್ ಯಾಸಿನಸಾಬ್ ನಾಲಬಂದಿ ಎಂಬ ಎಂಟು ಜನರ ತಂಡದ ಮೇಲೆ ಜಿಲ್ಲಾ ಅಪರಾಧ ದಳದ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ 22780 ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ. ದಾಳಿಯ ಕಾಲಕ್ಕೆ ಪುರಸಭೆ ಸದಸ್ಯನೊಬ್ಬ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಶಿಗ್ಲಿ ಬಳಿಯ ಅಣ್ಣಿಗೇರಿ ಅವರ ಕೆರೆ ಹತ್ತಿರ ಜೂಜಾಟದಲ್ಲಿ ತೊಡಗಿದ್ದ
ಶಿಗ್ಲಿಯ ಮಂಜುನಾಥ್ ಬಸಪ್ಪ ಯಲವಿಗೆ, ಮಹ್ಮದಸಾಬ್ ನದಾಫ್, ಆನಂದ ಈರಪ್ಪ ಮುದಗಲ್ಲ, ಆನಂದ ಯಲ್ಲಪ್ಪ ಮಹೇಂದ್ರಕರ್, ತುಳಚಪ್ಪ ಬಸಪ್ಪ ಮಡಿವಾಳರ, ಬಸಪ್ಪ ಮುರಿಗೆಪ್ಪ ಹೊನಕೇರಿ, ಬೆಳಗಾವಿ ಜಿಲ್ಲೆಯ ರಾಮದುರ್ಗದ ಗಂಗಾಧರ ಪಂಚಪ್ಪ ಯಲಗಂಟಿ ಎಂಬುವವರನ್ನು ಲಕ್ಷ್ಮೇಶ್ವರ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ 2800 ರೂಪಾಯಿ ಹಣವನ್ನು ಜಪ್ತಿ ಮಾಡಿದ್ದು, ಈ ಕುರಿತಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!