ವಿಜಯಸಾಕ್ಷಿ ಸುದ್ದಿ, ಗದಗ
ಟಿಪ್ಪರ ಮೂಲಕ ವೇಸ್ಟೇಜ್ ಕಟಿಂಗ್ ಡಾಂಬರನ್ನು ಅನಲೋಡ ಮಾಡುವಾಗ ವಿದ್ಯುತ್ ಸ್ಪರ್ಶವಾಗಿ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹಳೆ ರಸ್ತೆಯ ಡಾಂಬರನ್ನು ಕಿತ್ತು ಟಿಪ್ಪರ ಮೂಲಕ ಮಲಪ್ರಭಾ ನದಿಗೆ ಹೋಗುವ ಹಳೆ ಸೇತುವೆಯ ಬಳಿ ಅನಲೋಡ ಮಾಡುವಾಗ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ತಂತಿ ಟಿಪ್ಪರಗೆ ಸ್ಪರ್ಶವಾಗಿದ್ದು, ಚಾಲಕ ಮೋತಿಲಾಲ್ ನಾಮದೇವ ಲಮಾಣಿ (22) ಎಂಬಾತ ಮೃತಪಟ್ಟಿದ್ದಾನೆ.
ರಾಜದೀಪ ಕಂಪನಿಯು ಯಾವುದೇ ಮುನ್ನೆಚ್ಚರಿಕೆ ತಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದೇ ಈ ಅವಘಡಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜದೀಪ ಕಂಪನಿಯ ಸೂಪರ್ ವೈಸರ್ ಮೇಲೆ ಪ್ರಕರಣ ನರಗುಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



