ಪ್ರಥಮ ಪ್ರಾಶಸ್ತ್ಯದ ಮತ ನೀಡಲು ಮನವಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರೇಗಲ್ಲ 
ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ಪ್ರಚಾರ ನಡೆಸಲಾಯಿತು.
ಈ ವೇಳೆ ರೋಣ ಮಂಡಲ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಲ್ಲು ಮಾದರ ಮಾತನಾಡಿ, ಪದವೀಧರ ಹಾಗೂ ಶಿಕ್ಷಕರ ಪರವಾಗಿ ಸದನದಲ್ಲಿ ಸಾಕಷ್ಟು ಯೋಜನೆಗಳ ಬಗ್ಗೆ ನಿರಂತರ ಹೋರಾಟ ಮಾಡುತ್ತಿರುವ ಏಕೈಕ ಜನಪ್ರತಿನಿಧಿಯಾಗಿ ಎಸ್.ವಿ. ಸಂಕನೂರ ಉತ್ತಮ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಸಕ್ತ ಚುನಾವಣೆಯಲ್ಲಿ ಪದವೀಧರರು ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ, ಸೇವೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು ಎಂದರು.
ಅಮರೇಶ ಜಾಲಿಹಾಳ, ಅಬ್ದುಲ್‌ಸಾಹೇಬ ಹೊಸಳ್ಳಿ, ಪರಶುರಾಮ ಮಾದರ, ಶರಣಪ್ಪ ಕುಂದಗೋಳ, ಮಂಜುನಾಥ ದಳವಾಯಿ, ಬಸವರಾಜ ಹುಡೇದ, ಫಕೀರಪ್ಪ ಮಾದರ, ಯಮನಪ್ಪ ಮಾದರ, ಪ್ರಸನ ಸ್ಥಾವರಮಠ, ನೀಲಪ್ಪ ಮಾದರ, ರಾಮಣ್ಣ ಮಾದರ, ಶಿವಾನಂದ ಮರಗಣ್ಣವರ, ಬಸವರಾಜ ಮಾರನಬಸರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರಿದ್ದರು.
 


Spread the love

LEAVE A REPLY

Please enter your comment!
Please enter your name here