ವಿಜಯಸಾಕ್ಷಿ ಸುದ್ದಿ, ಗದಗ
ಏಳು ಜನರ ತಂಡವೊಂದು ಬೆಟಗೇರಿಯ ವೆಂಕಟೇಶ್ವರ ಕಲ್ಯಾಣ ಮಂಟಪದ ಬಳಿ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಬಂಧಿಸಿದ್ದಾರೆ.
ಬಂಧಿತರನ್ನು ಶಂಕ್ರಪ್ಪ ಸಂಗಪ್ಪ ಬೆನಕಲ್ಲ, ಪರಶುರಾಮ ಭೀಮಪ್ಪ ಗೋಟೂರು, ನಾಗರಾಜ್ ಗುರುನಾಥಪ್ಪ ಪರಗಿ, ರಮೇಶ್ ಹುಚ್ಚಪ್ಪ ಗೋಟೂರು, ರಘುವೀರ ಕಿಸನ್ ಸಿಂಗ್ ಭಾವರೆ, ಮಲ್ಲೇಶಪ್ಪ ಸಣ್ಣಕಲ್ಲಪ್ಪ ಕುರಹಟ್ಟಿ, ಬಸವರಾಜ್ ಹನಮಂತಪ್ಪ ನವಲಗುಂದ ಎಂದು ಗುರುತಿಸಲಾಗಿದೆ.

ಬಂಧಿತರಿಂದ 7500 ರೂ, ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



