ವಿಜಯಸಾಕ್ಷಿ ಸುದ್ದಿ, ಗದಗ
Advertisement
ಕೇಬಲ್ ಆಪರೇಟರ್ ಸೇರಿ ನಾಲ್ಕು ಜನ ಅಂದರ್-ಬಾಹರ್ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ಡಿಪೋ ಬಳಿ ನಡೆದಿದೆ.
ಗಜೇಂದ್ರಗಡ ಠಾಣೆಯ ಪಿಎಸ್ಐ ಗುರುಶಾಂತ ದಾಸ್ಯಾಳ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದ ಕೇಬಲ್ ಆಪರೇಟರ್ ಬದರಿನಾಥ್ ವೆಂಕಪ್ಪ ರಾಠೋಡ, ನಾಗಪ್ಪ ಈರಪ್ಪ ಮಾಳೋತ್ತರ್, ಮಾಂತೇಶ್ ಶಂಕ್ರಪ್ಪ ರಾಠೋಡ, ರವಿ ಕೃಷ್ಣಪ್ಪ ರಾಠೋಡ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತರಿಂದ 3550 ರೂಪಾಯಿ ನಗದು ವಸದಪಡಿಸಿಕೊಂಡಿದ್ದು, ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.