ಅಂದರ್-ಬಾಹರ್ ಜೂಜಾಟ; ಕೇಬಲ್ ಆಪರೇಟರ್ ಸಮೇತ ನಾಲ್ವರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕೇಬಲ್ ಆಪರೇಟರ್ ಸೇರಿ ನಾಲ್ಕು ಜನ ಅಂದರ್-ಬಾಹರ್ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ಡಿಪೋ ಬಳಿ ನಡೆದಿದೆ.

ಗಜೇಂದ್ರಗಡ ಠಾಣೆಯ ಪಿಎಸ್ಐ ಗುರುಶಾಂತ ದಾಸ್ಯಾಳ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದ ಕೇಬಲ್ ಆಪರೇಟರ್ ಬದರಿನಾಥ್ ವೆಂಕಪ್ಪ ರಾಠೋಡ, ನಾಗಪ್ಪ ಈರಪ್ಪ ಮಾಳೋತ್ತರ್, ಮಾಂತೇಶ್ ಶಂಕ್ರಪ್ಪ ರಾಠೋಡ, ರವಿ ಕೃಷ್ಣಪ್ಪ ರಾಠೋಡ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 3550 ರೂಪಾಯಿ ನಗದು ವಸದಪಡಿಸಿಕೊಂಡಿದ್ದು, ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here