ಅಂದರ್-ಬಾಹರ್ ಜೂಜಾಟ; ಸರಕಾರಿ ನೌಕರ, ವರ್ತಕರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಓರ್ವ ಸರಕಾರಿ ನೌಕರ, ನಾಲ್ಕು ಜನ ವರ್ತಕರು ಹಾಗೂ ಖಾಸಗಿ ನೌಕರನೊಬ್ಬ ಸೇರಿದಂತೆ ಒಂಬತ್ತು ಜನರ ತಂಡವೊಂದು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹರದಗಟ್ಟಿ ರಸ್ತೆಯಲ್ಲಿರುವ ಅಗಸ್ಥ್ಯತೀರ್ಥ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಅಂದರ-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಲಕ್ಷ್ಮೇಶ್ವರ ಠಾಣೆಯ ಪಿಎಸ್‌ಐ ಶಿವಕುಮಾರ ಲೋಹಾರ್ ಹಾಗೂ ಸಿಬ್ಬಂಧಿ ದಾಳಿ ಒಂಬತ್ತು ಜನರನ್ನು ಬಂಧಿಸಿ ಅವರಿಂದ 3800 ರೂ, ಗಳನ್ನು ವಶಪಡಿಸಿಕೊಂಡಿದ್ದಾರೆ.

ವರ್ತಕರಾದ ಸಾಗರ ಮಂಜುನಾಥ್ ಹಂಜಗಿ, ಪರಶುರಾಮ ಫಕ್ಕೀರಪ್ಪ ಹಂಜಗಿ, ವಿನಾಯಕ ರವಿ ಬಳ್ಳಾರಿ, ಆಕಾಶ ಭರಮಪ್ಪ ಬಂಡಾರಿ, ಸರಕಾರಿ ನೌಕರ ನವೀನ ಮಂಜುನಾಥ್ ಕಾಂಬಳೆ, ಖಾಸಗಿ ನೌಕರ ರಾಜು ಪರಮೇಶ್ ಸಾತಪೊತೆ, ಸೇಲ್ಸ್‌ಮೆನ್‌ ನಾಗರಾಜ್ ಯಲ್ಲಪ್ಪ ಕಾಂಬಳೆ ಹಾಗೂ ಅಮಿತ ಪರಶುರಾಮ ಮುಳಗುಂದ, ಗದಗ ನಿವಾಸಿ ಕುಂಟಪ್ಪ ದೊಡ್ಡದುರಗಪ್ಪ ವಿಭೂತಿ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here