ವಿಜಯಸಾಕ್ಷಿ ಸುದ್ದಿ, ಗದಗ
ಆನ್ ಲೈನ್ ಮೂಲಕ ಲಕ್ಷಾಂತರ ರೂ, ಹಣ ವಂಚಿಸಿದ ಆರೋಪಿಯನ್ನು ಗದಗ ಜಿಲ್ಲಾ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಹಳ್ಳಿಯ 24 ವರ್ಷದ ಮುರಾರಿ ವೆಂಕಟಯ್ಯ ಅಲಿಯಾಸ್ ರಾಜು ಮಿಖಾಯೆಲು ಎಂಬಾತನೇ ಬಂದಿಸಿಲಾಗಿದೆ.
ಬಂಧಿತನಿಂದ ಒಂದು ಲ್ಯಾಪ್ಟಾಪ್, ಮೊಬೈಲ್ ಹಾಗೂ ನಗದು 68 ಸಾವಿರ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಮುರಾರಿ ವೆಂಕಟಯ್ಯ ಎಂಬಾತ ಕಳೆದ ವರ್ಷ 2020 ಜುಲೈ 04 ರಂದು ವೀರಪ್ಪ ಚನ್ನಪ್ಪ ಮಾಳಗಿ ಎಂಬುವವರ ಎಸ್ ಬಿ ಐ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ, 21 ಸಾವಿರದ 726 ರೂ,ಗಳನ್ನು ಆನ್ ಲೈನ್ ಮುಖಾಂತರ ವರ್ಗಾವಣೆ ಮಾಡಿಕೊಂಡು ಮೋಸವೆಸಗಿದ್ದ.
ಸೈಬರ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.
ಸೈಬರ್ ಠಾಣೆಯ ಇನ್ಸ್ಪೆಕ್ಟರ್ ಮಹಾಂತೇಶ್ ಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ ಪಿ ದೊಡ್ಡಮನಿ, ಎಮ್ ವ್ಹಿ ಹೂಲಿಹಳ್ಳಿ, ಎಸ್ ಬಿ ಪಮ್ಮಾರ್, ಆನಂದಸಿಂಗ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾಗಿದ ಪೊಲೀಸ್ ತಂಡಕ್ಕೆ ಎಸ್ಸಿ ಯತೀಶ್ ಎನ್ ಶ್ಲಾಘಿಸಿದ್ದಾರೆ.