HomeKarnataka Newsಅವ್ವನೂ ಇಲ್ಲ, ಅಪ್ಪಾನೂ ಇಲ್ಲ, ಅವ್ವನ ಹೊಟ್ಟ್ಯಾನ ಪಾಪುನೂ ಇಲ್ಲ ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವ...

ಅವ್ವನೂ ಇಲ್ಲ, ಅಪ್ಪಾನೂ ಇಲ್ಲ, ಅವ್ವನ ಹೊಟ್ಟ್ಯಾನ ಪಾಪುನೂ ಇಲ್ಲ ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವ ತಬ್ಬಲಿ ಮಗು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರಾಯಚೂರು

ಮಹಾಮಾರಿ ರಾಜ್ಯದಲ್ಲಿ ಸಾಕಷ್ಟು ಪ್ರಾಣಗಳನ್ನು ಬಲಿ ಪಡೆದಿದೆ. ಇದರಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಹಲವು ಮಕ್ಕಳು ಅನಾಥರಾಗಿದ್ದಾರೆ. ಈ ಹೆಮ್ಮಾರಿಯಿಂದ ಜಿಲ್ಲೆಯಲ್ಲಿನ ಒಂದು ಮಗು ಕೂಡ ತಬ್ಬಲಿಯಾಗಿದೆ.

ದೇವದುರ್ಗದ ನಾಲ್ಕು ವರ್ಷದ ಪುಟ್ಟ ಬಾಲಕ ಗಿರೀಶ್ ಒಂದೇ ತಿಂಗಳ ಅಂತರಲ್ಲಿ ತಂದೆ – ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥನಾಗಿದ್ದಾನೆ. ಮಹಾಮಾರಿಯಿಂದಾಗಿ ತಂದೆ ದೇವೇಂದ್ರಪ್ಪ ಏ. 27ರಂದು ಸಾವನ್ನಪ್ಪಿದ್ದರೆ, ತಾಯಿ ಚಂದ್ರಕಲಾ ಮೇ. 14ರಂದು ಸಾವನ್ನಪ್ಪಿದ್ದರು.

ಕೊರೊನಾದಿಂದ ಒದ್ದಾಡುತ್ತಿದ್ದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಚಂದ್ರಕಲಾ ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಮಹಾಮಾರಿಯ ಅಟ್ಟಹಾಸದ ಎದುರು ವೈದ್ಯರ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹೀಗಾಗಿ ಚಂದ್ರಕಲಾ ಅವರು ಉಳಿಯಲಿಲ್ಲ. ಅದರೊಂದಿಗೆ ಮಗುವೂ ಉಳಿಯಲಿಲ್ಲ. ಇದರಿಂದಾಗಿ ಈ ದಂಪತಿಯ ಮೊದಲ ಮಗ ಅನಾಥವಾಗಿದ್ದಾನೆ.

ದೇವದುರ್ಗದ ಗೌಸ್ ಮೊಹಮದ್ ಕಾಲೋನಿ ನಿವಾಸಿಗಳಾದ ದೇವೇಂದ್ರಪ್ಪ ಹಾಗೂ ಚಂದ್ರಕಲಾ ಸಾವಿನಿಂದಾಗಿ ಅವರ ಮಗುವಿಗೆ ದಿಕ್ಕು ತೋಚದಂತಾಗಿದೆ. ಸದ್ಯ ಈ ಮಗು ಅಜ್ಜ, ಅಜ್ಜಿ ಹಾಗೂ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆಯುತ್ತಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!