ಆಟೋ ಚಾಲಕರಿಗೆ ಧಮ್ಕಿ ಆರೋಪ; ಮರಿಪುಢಾರಿ ರೋಹಿತ್ ಕಟ್ಟಿಮನಿ ಅಂದರ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ನಗರದ ಎಸ್ ಎಂ ಕೃಷ್ಣ ಆಟೋ ಚಾಲಕರ ಮೇಲೆ ಧಮ್ಕಿ ಹಾಕಿ ದಬ್ಬಾಳಿಕೆ ನಡೆಸುತ್ತಿದ್ದ ಮರಿಪುಢಾರಿ ರೋಹಿತ್ ಕಟ್ಟಿಮನಿಗೆ ಕೊನೆಗೂ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ನಗರದ ಬಹುತೇಕ ಆಟೋ ಚಾಲಕರಿಗೆ ಧಮ್ಕಿ ಹಾಕಿ ದಿನನಿತ್ಯ ಕಿರುಕುಳ ನೀಡುತ್ತಿದ್ದ ರೋಹಿತ್ ಮೇಲೆ ಕಠಿಣ ಕ್ರಮಕ್ಕಾಗಿ ಆಗ್ರಹಿಸಿ ಆಟೋ ಚಾಲಕರು ನಿನ್ನೆ ಗ್ರಾಮೀಣ ಠಾಣೆಯ ಪೊಲೀಸರ ಮೊರೆ ಹೋಗಿದ್ದರು.

ಇದನ್ನೂ ಓದಿ ಮರಿ ಪುಢಾರಿಯ ಧಮ್ಕಿ; ಪೊಲೀಸರ ಮೊರೆ ಹೋದ ಆಟೋ ಚಾಲಕರು!

ನಗರದ ಸೆಟಲ್ಮೆಂಟ್ ಏರಿಯಾ ನಿವಾಸಿ ರೋಹಿತ್ ಕಟ್ಟಿಮನಿ ಎಸ್ ಎಮ್ ಕೃಷ್ಣ ನಗರದ ಆಟೋ ಸ್ಟ್ಯಾಂಡ್ ಗೆ ನುಗ್ಗಿ ಪುಂಡಾಟಿಕೆ ಮಾಡ್ತಾನಂತೆ. ಆಟೋ ಚಾಲಕರಿಗೆ ಧಮ್ಕಿ‌ ಹಾಕಿ ಹಣ ಕೀಳೋದು. ಆಟೋ ಚಾಲಕರನ್ನ ಪೀಡಿಸೋದೆ ಕಾಯಕ ಮಾಡ್ಕೊಂಡಿದ್ದನಂತೆ.

ರೋಹಿತ್ ನ ಉಪಟಳದಿಂದ ರೋಸಿ ಹೋದ ಎಸ್ ಎಮ್ ಕೃಷ್ಣ ಬಡಾವಣೆ ಆಟೋ ಚಾಲಕರು ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ರೋಹಿತನ ಉಪಟಳಕ್ಕೆ ಬ್ರೇಕ್ ಹಾಕಿ ಅಂತಾ ಪಿಎಸ್ ಐ ಅಜಿತ್ ಹೊಸಮನಿ ಅವರಿಗೆ ಮನವಿ ಮಾಡಿಕೊಂಡಿದ್ದರು.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here