ಆಸ್ತಿ ಕಲಹ; ತಮ್ಮನನ್ನು ಗುಂಡಕ್ಕಿ ಕೊಂದ ಅಣ್ಣ

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

Advertisement

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತಮ್ಮನನ್ನು ಗುಂಡಿಟ್ಟು ಕೊಂದಿರುವ ಭೀಕರ ಘಟನೆ ಜರಗಿದೆ.

ತಾಲೂಕಿನ ಕವಲೂರು ಗ್ರಾಮದ ವಿನಾಯಕ ದೇಸಾಯಿ (38) ಮೃತ ವ್ಯಕ್ತಿ. ಇವರ ಅಣ್ಣ ರಾಘವೇಂದ್ರ ದೇಸಾಯಿ ಕೊಲೆ ಮಾಡಿದಾತ. ಆಸ್ತಿಗಾಗಿ ಅಣ್ಣ ತಮ್ಮಂದಿರ ನಡುವೆ ಬಹುದಿನದಿಂದ ಜಗಳವಿತ್ತು. ವಿವಾದ ಇರುವಾಗಲೇ ರಾಘವೇಂದ್ರ ದೇಸಾಯಿ ಹೊಲದಲ್ಲಿ ಬಿತ್ತನೆ ಮಾಡಿದ್ದಾನೆ. ಅದನ್ನು ತೆರವು ಮಾಡಲು ವಿನಾಯಕ‌ ದೇಸಾಯಿ ತೆರಳಿದಾಗ ಪರಸ್ಪರ ಜಗಳವಾಗಿದೆ. ಇದರಿಂದ ಉದ್ರಿಕ್ತಗೊಂಡ ರಾಘವೇಂದ್ರ ದೇಸಾಯಿ ತನ್ನ ಪರವಾನಗಿ ಹೊಂದಿದ ಬಂದೂಕಿನಿಂದ ವಿನಾಯಕನಿಗೆ ಗುಂಡು ಹೊಡೆದು ಕೊಲೆಗೈದು ಮನೆಯಲ್ಲಿ ಅವಿತು ಕುಳಿತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಅರುಣಾಂಗ್ಶು ಗಿರಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here