ಆ. 23 ರಿಂದ 9-12 ತರಗತಿಗಳು ಆರಂಭ

0
Spread the love

  • ಚಿತ್ರದುರ್ಗದಲ್ಲಿ ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

Advertisement

23 ರಿಂದ 9 ರಿಂದ 12ನೇ ತರಗತಿಗಳು ಆರಂಭಕ್ಕೆ ಸರ್ಕಾರ ತೀರ್ಮಾನಿಸಿದೆ. 30 ರಂದು ಸಿಎಂ ಜೊತೆ ಸಭೆ ನಡೆಸಿ ಚರ್ಚಿಸಿ 1-8ನೇ ತರಗತಿಗಳ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.

ಚಿತ್ರದುರ್ಗದಲ್ಲಿ‌ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಕ್ಕಳ ತಜ್ಞರು ಸಹಿತ ಮಕ್ಕಳಿಗೆ ಇನ್ಪೆಕ್ಷನ್ ಕಡಿಮೆ ಎಂದು ವರದಿ ನೀಡಿದ್ದಾರೆ. ಆನ್ ಲೈನ್ ಶಿಕ್ಷಣ ಪ್ರಯತ್ನವನ್ನೂ ಸರ್ಕಾರ ಮಾಡಿತ್ತು, ಆದರೆ ಶೇ.40ರಷ್ಟು ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಸಿಕ್ಕಿಲ್ಲ ಎಂದು ವರದಿ ನೀಡಿದ್ದಾರೆ.‌


ಮಕ್ಕಳು ಭಯದಿಂದ ಶಾಲೆಗೆ ಬರಲಿಲ್ಲ ಎಂದರೆ ಶಿಕ್ಷಕರು ಮನವೊಲಿಸಬೇಕು. ಯಾವುದೇ ಕಾರಣಕ್ಕೂ ಶಿಕ್ಷಕರು ಬಲವಂತ ಮಾಡಬಾರದು. ಆನ್ ಲೈನ್ ಶಿಕ್ಷಣಕ್ಕೂ ನಮ್ಮ ಇಲಾಖೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಯಾವುದಾದರೂ ಶಾಲೆಯಲ್ಲಿ ಪಾಸಿಟಿವ್ ಕಂಡು ಬಂದರೆ ಒಂದು ವಾರ ಸೀಲ್ ಡೌನ್ ಗೆ ನಿರ್ಧಾರ ಮಾಡಿದ್ದೇವೆ. 12 ಲಕ್ಷ ಪಿಯುಸಿ ಸೀಟ್ ಗಳು ನಮ್ಮ ಬಳಿ ಇದೆ, ಯಾವುದೇ ಸಮಸ್ಯೆ ಇಲ್ಲ. ಅನೇಕ ಕಡೆ ಸ್ವಲ್ಪ ವ್ಯತ್ಯಾಸಗಳಿದೆ. ಎಲ್ಲಿ ಅವಕಾಶ ಇದೆ ಆ ಕಡೆ ಸ್ಥಳೀಯ ಡಿಡಿಪಿಐ ವ್ಯವಸ್ಥೆ ಮಾಡುತ್ತಾರೆ.

ಪ್ರತಿ ದಿನವೂ ಅಡ್ಮೀಷನ್ ಮೇಲೆ ನಿಗಾವಹಿಸಿದ್ದೇವೆ ಎಂದು ಹೇಳಿದರು.
16 ಸಾವಿರ ಮಕ್ಕಳು ಮಾತ್ರ, ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಾರೆ. ಪರೀಕ್ಷೆ ನಡೆಸಲು ಕಷ್ಟವಾಗುವುದಿಲ್ಲ. ತೃಪ್ತಿ ಇಲ್ಲ ಎಂಬ ಮಕ್ಕಳಿಗೆ ಎಕ್ಸಾಂಗೆ ಅವಕಾಶ ಮಾಡಿದ್ದೇವೆ. ನಾಳೆ ಪರೀಕ್ಷೆ ಶುರುವಾಗುತ್ತದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here