ಇಂಡಿಯಾ, ಶ್ರೀಲಂಕಾ ಸರಣಿಯ ಮೇಲೆ ಮತ್ತೆ ದಾಳಿ ಮಾಡಿದ ಕೊರೊನಾ

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ಇತ್ತೀಚೆಗಷ್ಟೇ ಬಿಸಿಸಿಐ, ಶ್ರೀಲಂಕಾಕ್ಕೆ ತೆರಳುವ ಭಾರತೀಯ ಕ್ರಿಕೆಟ್ ತಂಡ ಘೋಷಿಸಿತ್ತು. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ನಾಯಕರ ಅಲಭ್ಯ ಈ ತಂಡದಲ್ಲಿತ್ತು. ಆದರೆ, ಈ ಹೊಸ ತಂಡ ತೆರಳುವ ಕುತೂಹಲಕ್ಕೆ ವಿಘ್ನ ಎದುರಾಗಿದೆ.
ಸದ್ಯ ಭಾರತದಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರೊಂದಿಗೆ ಶ್ರೀಲಂಕಾದಲ್ಲಿಯೂ ಕೊರೊನಾ ಹಾವಳಿ ಮಿತಿ ಮೀರುತ್ತಿದೆ. ಕೆಲವು ದಿನಗಳಿಂದ ಶ್ರೀಲಂಕಾದಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಾಗಿ ಆತಿಥೇಯ ಭಾರತದೊಂದಿಗೆ ಕ್ರಿಕೆಟ್ ಸರಣಿ ನಡೆಯುವುದು ಅನಿವಾರ್ಯ ಎನ್ನಲಾಗುತ್ತಿದೆ.

ಜುಲೈ ತಿಂಗಳಲ್ಲಿ ಭಾರತೀಯ ಕ್ರಿಕೆಟ್ ತಂಡವು ಏಕದಿನ ಮತ್ತು ಟಿ 20 ಸರಣಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎನ್ನಲಾಗಿತ್ತು. ಇತ್ತೀಚೆಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಈ ಕುರಿತು ಹೇಳಿದ್ದರು. ಅಷ್ಟೇ ಅಲ್ಲ, ಈ ಸರಣಿಗೆ ಇಂಗ್ಲೆಂಡ್ ಗೆ ತೆರಳುವ ಯಾವುದೇ ಸದಸ್ಯ ಹೋಗುವುದಿಲ್ಲ ಎಂದು ಸೌರವ್ ಹೇಳಿ ಅಚ್ಚರಿ ಮೂಡಿಸಿದ್ದರು. ಈ ಸರಣಿಯನ್ನು ಹಿಂದಿನ ವರ್ಷವೇ ಫ್ಯೂಚರ್ ಟೂರ್ ಕಾರ್ಯಕ್ರಮದಡಿ ಆಡಬೇಕಿತ್ತು. ಆದರೆ, ಮಹಾಮಾರಿಯಿಂದಾಗಿ ಆಡಲು ಆಗಿರಲಿಲ್ಲ.

ಸದ್ಯ ಮತ್ತೊಮ್ಮೆ ಈ ಸರಣಿಗೆ ಮಹಾಮಾರಿಯ ಕಾಟ ಶುರುವಾಗಿದೆ. ಎರಡನೇ ಬಾರಿಯೂ ಈ ಸರಣಿಯ ಮೇಲೆ ಕೊರೊನಾ ದಾಳಿ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್‌ ನ ನಿರ್ವಹಣಾ ಸಮಿತಿ ಮುಖ್ಯಸ್ಥ ಅರ್ಜುನ್ ಡಿಸಿಲ್ವಾ ತಿಳಿಸಿದ್ದಾರೆ. ಆದರೂ ಈಗಾಗಲೇ ನಾವು ಇಂಗ್ಲೆಂಡ್ ತಂಡದೊಂದಿಗಿನ ಸರಣಿಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಸರಣಿಯನ್ನು ಕೂಡ ಹಾಗೆಯೇ ನಡೆಸುತ್ತೇವೆ ಎಂದು ಡಿಸಿಲ್ವಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here