ಇಸ್ಪೀಟು ಜೂಜಾಟ; 13 ಜನರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 13 ಜನರ ತಂಡದ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ‌ ಗ್ರಾಮದ ಜೋಕುಮಾರ ಕೆರೆ ಹತ್ತಿರ ಜೂಜಾಟದಲ್ಲಿ ತೊಡಗಿದ್ದ ವೆಂಕಟೇಶ ಹಾಲಪ್ಪ ಮಾಯಕೊಂಡ, ಫಕ್ಕೀರೇಶ್ ರಾಮಪ್ಪ ಸಾಲಿ, ಆಂಜನೇಯ ರಾಮಪ್ಪ ನೆನಗನಹಳ್ಳಿ, ಸಿದ್ದಪ್ಪ ಬಸಪ್ಪ ಕುರಿ, ಹಜರತ್ ಅಲಿ ಮುನಾಫ್ ಕರಕಿ, ವಿಜಯಕುಮಾರ್ ಬಸವಣ್ಣೆಪ್ಪ ಕಡೆಮನಿ, ಕರಿಯಪ್ಪ ನೀಲಪ್ಪ ಮುದಿಯಮ್ಮನವರ್, ಫಕ್ಕೀರೇಶ್ ನಿಂಗಪ್ಪ ಕಂಬಳಿ, ಮಲ್ಲಪ್ಪ ನಿಂಗಪ್ಪ ಜಟ್ಟೆಣ್ಣವರ, ಮಂಜುನಾಥ್ ತಿರಕಪ್ಪ ಪಟ್ಟೇದ, ಬಾಳಪ್ಪ ಸುರೇಶಪ್ಪ ಕಟ್ಟಿಮನಿ, ಹನಮಂತಪ್ಪ ಗೋವಿಂದಪ್ಪ ಹಂಗನಕಟ್ಟಿ, ಜಗದೀಶ್ ಬಸವಣ್ಣೆಪ್ಪ ಕಡೇಮನಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 2230 ರೂ,ಗಳನ್ನು ಜಪ್ತಿ ಮಾಡಲಾಗಿದ್ದು, ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here