HomeCrime Newsಇಸ್ಪೀಟು ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ; 27 ಜನರ ಬಂಧನ,13 ಸಾವಿರ ರೂ. ಜಪ್ತಿ

ಇಸ್ಪೀಟು ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ; 27 ಜನರ ಬಂಧನ,13 ಸಾವಿರ ರೂ. ಜಪ್ತಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ
 
ಜಿಲ್ಲೆಯ ವಿವಿಧೆಡೆ ಇಸ್ಪೀಟು ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ 27 ಜನರನ್ನು ವಶಕ್ಕೆ ಪಡೆದು ಸುಮಾರು 13 ಸಾವಿರ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ಮುಳಗುಂದದ ಎರಡು ಕಡೆ, ನರೇಗಲ್ ಹಾಗೂ ಶಿರಹಟ್ಟಿಗಳಲ್ಲಿ ನಾಲ್ಕು ಪ್ರತ್ಯೇಕ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ದಿ.14ರಂದು ಮುಳಗುಂದ ಪಟ್ಟಣದ ಸವಳಬಾವಿ ಓಣಿಯಲ್ಲಿರುವ ಈಶ್ವರ ದೇವಸ್ಥಾನದ ಎದುರು ಹಣವನ್ನು ಪಣಕ್ಕಿಟ್ಟು ಅಂದರ್-ಬಾಹರ್ ಆಡುತ್ತಿದ್ದ ರಾಜೇಸಾಬ್ ಕಾಶಿಮಸಾಬ್ ಡಾಲಾಯತ್, ಯಲ್ಲಪ್ಪಾ ಶೇಖರಪ್ಪಾ ಬೆಂತೂರು, ಮಹಮದ್ ರಫೀಕ್ ದಾವಲಸಾಬ ಮಾಲದಾರ, ಜಹೀದ್ ಪರ್ಜಲಸಾಬ್ ಡಾಲಾಯತ್, ಈಶಪ್ಪ ಸಿದ್ಧಪ್ಪ ಮೊರಬದ್, ಚೆನ್ನಬಸಪ್ಪ ಶಿದ್ದರಾಮಪ್ಪ ಕಿತ್ತೂರು, ಬಸವರಾಜ ಬಸಲಿಂಗಪ್ಪ ಮಟ್ಟಿ ಇವರನ್ನು ಬಂಧಿಸಿ ಜೂಜಿನಲ್ಲಿ ತೊಡಗಿಸಿಕೊಂಡಿದ್ದ 2900.ರೂ ಹಣವನ್ನು ವಶಕ್ಕೆ ಪಡೆಯಲಾಗಿದೆ. ಎಎಸ್ಐ ಬಿ.ಎಂ. ಕುರ್ತಕೋಟಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ದಿನ ಸವಳಬಾವಿ ಓಣಿಯಲ್ಲಿರುವ ಗರಡಿಮನೆಯ ಪಕ್ಕದ ಸಾರ್ವಜನಿಕ ಬಯಲು ಜಾಗದಲ್ಲಿ ಗುಂಪಾಗಿ ಕುಳಿತು ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಚೆನ್ನಪ್ಪ ಫಕೀರಪ್ಪ ಕಲ್ಯಾಣಿ, ಹಸನಸಾಬ್ ನಬಿಸಾಬ್ ಹುಬ್ಬಳ್ಳಿ, ಬಸವರಾಜ ಕೋಶಪ್ಪ ವಸ್ತ್ರದ, ಬಸಪ್ಪ ಸೋಮಪ್ಪ ಲಕ್ಷ್ಮೇಶ್ವರ, ಇಸ್ಮಾಯಿಲ್ ಜಮಾಲಸಾಬನವರ್, ಗೂಳಪ್ಪ ಫಕೀರಪ್ಪ ಕಳಸದ್, ಫಕೀರಪ್ಪ ತಿಪ್ಪಣ್ಣ ಜೋಗಿ, ಮಲ್ಲಪ್ಪ ನೀಲಪ್ಪ ಕೋಳಿವಾಡ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿತರಿಂದ ಆಟಕ್ಕೆ ತೊಡಗಿಸಿದ್ದ 3820 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಸದಲಗಿ ಈ ದಾಳಿಯ ನೇತೃತ್ವ ವಹಿಸಿದ್ದರು.
 ನರೇಗಲ್ ಠಾಣಾ ವ್ಯಾಪ್ತಿಯ ಡ.ಸ ಹಡಗಲಿ ಗ್ರಾಮದ ಆಶ್ರಯ ಕಾಲೋನಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದಿರುವ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿಕೊಂಡಿದ್ದ ಪ್ರವೀಣ ಯಮನೂರಪ್ಪ ಚೆಗರಡ್ಡಿ, ಪ್ರಕಾಶ ರುದ್ರಗೌಡ ಪಾಟೀಲ, ಮಂಜುನಾಥ ಪರಸಪ್ಪ ಮಲ್ಲಾಪುರ, ಚನ್ನಬಸನಗೌಡ ವೀರನಗೌಡ್ರ, ಶರಣಪ್ಪ ಸಂಗಪ್ಪ ಮೇಟಿ ಇವರನ್ನು ನರೇಗಲ್ ಠಾಣೆಯ ಪಿಎಸ್ಐ ಕಿರಣಕುಮಾರ್ ಹಾಗೂ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಆರೋಪಿತರಿಂದ ಆಟದಲ್ಲಿ ತೊಡಗಿಸಿದ್ದ 2200ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ನರೇಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿ.15ರಂದು ಶಿರಹಟ್ಟಿ ಠಾಣೆಯಲ್ಲಿ ಇಂಥದೇ ಇಸ್ಪೀಟ್ ಜೂಜಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಶಿರಹಟ್ಟಿ ಜಲ್ಲಿಗೇರಿ ಗ್ರಾಮದ ಸರ್ವೇಶ್ವರ ದೇವಸ್ಥಾನದ ಎದುರಿಗಿರುವ ಯುವಕ ಮಂಡಳಕ್ಕೆ ಸೇರಿದ ಸ್ಥಳದಲ್ಲಿ ಕುಮಾರ ಮುದುಕಪ್ಪ ಚಿಂಚಲಿ, ಮಲ್ಲೇಶ ಶೇಖಪ್ಪ ಕಟಗಿ, ಮಲ್ಲಪ್ಪ ದೇವಪ್ಪ ಕುಳಗೇರಿ, ಕೃಷ್ಣಪ್ಪ ತಿಪ್ಪಣ್ಣ ಗಡೇದ, ಮಂಜಪ್ಪ ಮಲ್ಲಪ್ಪ ತಳವಾರ, ಮಂಜುನಾಥ ಬಸಪ್ಪ ಗುಳ್ಳಣ್ಣವರ್ ಹಾಗೂ ವೆಂಕಟೇಶ ರಾಮಣ್ಣ ಕಲಾಲ ಇವರುಗಳು ಅಂದರ್-ಬಾಹರ್ ಆಟ ಆಡುತ್ತಿದ್ದಾಗ ಪಿಎಸ್ಐ ಪ್ರವೀಣ ಗಂಗೋಳ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿತರನ್ನು ಹಾಗೂ ಆಟದಲ್ಲಿ ತೊಡಗಿಸಿಕೊಂಡಿದ್ದ 4230.ರೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!