ವಿಜಯಸಾಕ್ಷಿ ಸುದ್ದಿ, ಹಾವೇರಿ
Advertisement
ಉಗುರಿಗಾಗಿ ಚಿರತೆ ಕೊಂದ ಆರೋಪದಲ್ಲಿ ಇಬ್ಬರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಮನಹಳ್ಳಿಯಲ್ಲಿ ನಡೆದಿದೆ.
ಸಂತೋಷ ಲಮಾಣಿ (50)
ಮಂಜುನಾಥ ಪೀರಪ್ಪ ಲಮಾಣಿ (30) ಬಂಧನಕ್ಕೊಳಗಾದ ಆರೋಪಿಗಳು.
ಒಂದು ವರ್ಷ ಪ್ರಾಯದ ಚಿರತೆಯನ್ನು ಕೊಂದು ಕಾಲುಗಳ ಕತ್ತರಿಸಿ ತಂದು ಮನೆಯ ಹಿತ್ತಲಿನಲ್ಲಿ ಬಚ್ಚಿಟ್ಟಿದ್ದರು.

ಖಚಿತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಚಿರತೆ ಕಾಲು ವಶಕ್ಕೆ ಪಡೆದಿದ್ದಾರೆ. ಉಗುರು ಪಡೆಯಲು ಚಿರತೆ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.